ಪಾವಗಡ ಫಟ್ಡಣದಲ್ಲಿ ಬಳ್ಳಾರಿ ರಾಜ್ಯ ಹೆದ್ದಾರಿ ರಸ್ತೆಯ ಚಳ್ಳಕೆರೆ ಕ್ರಾಸ್ ಬಳಿ ಇರುವ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲ ಸೌಕರ್ಯವಿಲ್ಲದೆ ರೋಗಗ್ರಸ್ಥವಾಗಿದೆ.
ಅಧಿಕಾರಿಗಳ ಅಸಡ್ಡೆಗೆ 'ಕುರಿ ದೊಡ್ಡಿ'ಯಾದ ಅಂಬೇಡ್ಕರ್ ವಸತಿ ಶಾಲೆ..
ಪಾವಗಡ : ಪಟ್ಟಣದಲ್ಲಿರವ ಬಳ್ಳಾರಿ ರಾಜ್ಯ ಹೆದ್ದಾರಿಯ ಚಳ್ಳಕೆರೆ ಕ್ರಾಸ್ ಬಳಿ ಇರುವ, ತಾಲ್ಲೂಕಿನ ಏಕೈಕ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಸಂಪೂರ್ಣವಾಗಿ ರೋಗಗ್ರಸ್ತವಾಗಿದೆ.
1ರಿಂದ 5ನೇ ತರಗತಿಯ 125 ಮುಗ್ಧ ಮಕ್ಕಳಲ್ಲಿ ಶೇ. 90ರಷ್ಟು ಭಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಹಾಗೂ ಅನಾಥ ಮಕ್ಕಳೇ ಇದ್ದು, ವ್ಯವಸ್ಥೆಯ ಕ್ರೂರ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದ್ದಾರೆ.
ಅಸಹ್ಯ ಹುಟ್ಟಿಸುವ ವಾತಾವರಣ, ಜೀವ ಭಯದಲ್ಲಿ ಮಕ್ಕಳು:
ಶೌಚಾಲಯ-ಸ್ನಾನದ ಗೃಹದ ನರಕ..ಹೆಣ್ಣು ಮತ್ತು ಗಂಡು ಮಕ್ಕಳಿಗೆ ಒಂದೇ ಕಡೆ ಶೌಚಾಲಯ ಹಾಗೂ ಸ್ನಾನದ ಗೃಹವಿದೆ!
ಸೂಕ್ತ ಶೌಚಾಲಯವಿಲ್ಲದೆ ಬಾಲಕಿಯರು ಬಯಲು ಶೌಚಕ್ಕೆ ಸುತ್ತಮುತ್ತಲಿನ ಗಿಡಗಂಟಿಗಳ ಆಸರೆ ಪಡೆಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಮುಖ್ಯ ಶಿಕ್ಷಕರು ಮಕ್ಕಳುನ್ನು ಬಯಲು ಶೌಚಾಲಯಕ್ಕೆ ಕಳಿಸುತ್ತಾರೆ.
ಸುತ್ತಮುತ್ತಲಿನ ಗಿಡಗಂಟಿಗಳ ಹಾವುಗಳು ಸಂಭವಿಸಿದರೆ ಕೋಣೆ ಯಾರು.
ನೆಲದ ಮೇಲೆಯೇ ಜೀವನ:
ಡೈನಿಂಗ್ ಹಾಲ್ ಇಲ್ಲದೆ ಮಕ್ಕಳು ಮಣ್ಣಿನ ಮೇಲೆಯೇ ಕುಳಿತು ಊಟ ಮಾಡುತ್ತಿದ್ದಾರೆ.
ಸೂಕ್ತ ಬೆಳಕಿಲ್ಲದ ಕೊಠಡಿಗಳಲ್ಲಿ, ಮಣ್ಣಿನ ಮೇಲೆಯೇ ಕೂತು ಹೋಮ್ವರ್ಕ್ ಮಾಡುವ ದೃಶ್ಯಗಳು ಎಂಥವರ ಕಣ್ಣಲ್ಲೂ ನೀರು ತರಿಸುತ್ತವೆ.
ಯಾವ ಕ್ಷಣದಲ್ಲಾದರೂ ಬೀಳಬಹುದು ಮೇಲ್ಚಾವಣಿ...ಕಟ್ಟಡವು ಸಂಪೂರ್ಣ ದುರಸ್ತಿಯಲ್ಲಿದ್ದು, ಬಿರುಗಾಳಿ ಬಂದರೆ ಮೇಲ್ಚಾವಣಿ ಕುಸಿದು ಬೀಳುವ ಭೀತಿಯಲ್ಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ.
ಅಧಿಕಾರಿಗಳ ಡೋಂಗಿ ಪ್ರದರ್ಶನ ಮತ್ತು ಯಕ್ಷಪ್ರಶ್ನೆ:
ಬಾಲಕಾರ್ಮಿಕ ದಿನಾಚರಣೆಯಲ್ಲಿ ವಿರುದ್ದ ಭಾಷಣ ಬಿಗಿಯುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕಚೇರಿಗಳಿಗೆ ಲಕ್ಷಾಂತರ ರೂಪಾಯಿ ಸುರಿದು.(ಪಿಓಪಿ.)ಹಾಗೂ ಕ್ರೀಡಾಂಗಣಗಳನ್ನು ನಿರ್ಮಿಸಿಕೊಳ್ಳುತ್ತಾರೆ.
ಆದರೆ ಈ ಮುಗ್ಧ ಮಕ್ಕಳ ಮೂಲಸೌಕರ್ಯಕ್ಕೆ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆ..
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಉತ್ತರಿಸಬೇಕಿದೆ.
ಪತ್ರಿಕೆಯ ಸಾರ್ವಜನಿಕ ಹಕ್ಕೊತ್ತಾಯ ಹಾಗೂ ಖಡಕ್ ಆಗ್ರಹ...
ಉನ್ನತಾಧಿಕಾರಿಗಳು ಹಾಸ್ಟೆಲ್ನಲ್ಲೇ ರಾತ್ರಿ ವಾಸ್ತವ್ಯ ಹೂಡಲಿ: ತಾಲ್ಲೂಕು ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ತಕ್ಷಣವೇ ಈ ಹಾಸ್ಟೆಲ್ನಲ್ಲಿ ರಾತ್ರಿ ವಾಸ್ತವ್ಯ ಮಾಡಿ, ಇಲ್ಲಿನ ಭೀಕರ ನರಕಯಾತನೆಯನ್ನು ಕಣ್ಣಾರೆ ನೋಡಬೇಕು.
ತಕ್ಷಣ ಮೊಬೈಲ್ ಶೌಚಾಲಯ ನೀಡಿ...
ತಕ್ಷಣವೇ ಶಾಲೆಗೆ ಮೊಬೈಲ್ ಶೌಚಾಲಯ ಹಾಗೂ ತಾತ್ಕಾಲಿಕ ಸ್ನಾನದ ಗೃಹಗಳನ್ನು ಒದಗಿಸಬೇಕು.
ಆಯೋಗಗಳ ನೇರ ಭೇಟಿ: ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಖುದ್ದಾಗಿ ವಸತಿ ಶಾಲೆಗೆ ಭೇಟಿ ನೀಡಿ,
ಈ ದಯನೀಯ ಸ್ಥಿತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು.
ಅಂತಿಮ ಎಚ್ಚರಿಕೆ... ಒಂದು ವೇಳೆ ಕಟ್ಟಡ ಕುಸಿದು ಮಕ್ಕಳಿಗೆ ಏನಾದರೂ ದುರಂತ ಸಂಭವಿಸಿದರೆ, ಅದಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತವೇ ನೇರ ಹೊಣೆಯಾಗುತ್ತದೆ.
ತಕ್ಷಣವೇ ಶಾಶ್ವತ ಪರಿಹಾರ ಒದಗಿಸದಿದ್ದರೆ, ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಮತ್ತು ಪೋಷಕರು ಅಧಿಕಾರಗಳ ವಿರುದ್ಧ ಆಕ್ರೋಶದ ಬಿರುಗಾಳಿ ಏಳುವುದು ಖಚಿತ!
ವರದಿ : ಶಿವಾನಂದ


