
ನಂತರ ಜಯಂತಿ ಸಮಿತಿ ಅಧ್ಯಕ್ಷ ಗಂಗಾಧರ್ ಮಾಡಬೂಳ ಮಾತನಾಡಿ, ತಮ್ಮ ಅವಿರತ ಹೋರಾಟದಿಂದ ಈ ಹಿಂದಿನ ಸಮಾಜ ಸುಧಾರಕರು ಯಾರು ಸಾಧಿಸದಿದ್ದಂಥ ಮಹಾ ಕ್ರಾಂತಿಯನ್ನು ಎಸಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು,ಸಾಮಾಜಿಕ ಆರ್ಥಿಕ ಸಂಕಷ್ಟಗಳನ್ನು ಮೀರಿ ನಿಂತು ಅನೇಕ ಪ್ರಥಮಗಳನ್ನು ಅವರು ಸಾಧಿಸಿದರು, ಅಂಬೇಡ್ಕರ್ ಈ ದೇಶದ ಶಕ್ತಿ, ಸರ್ವ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು ಎಂದರು ,ಈ ವೇಳೆ ಸುಮಾರು 46 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಂತೋಷ ಎಮ್ ನಾರನಳ, ಉಪಾಧ್ಯಕ್ಷರು ಅಂಬರೀಶ್ ಮೊಘಾ, ಕಾರ್ಯಧ್ಯಕ್ಷ ಅಮರ ಗೊಟೂರ್, ಕೋಶಧ್ಯಕ್ಷ ಕಪಿಲ್ ಎಸ್ ದೊಡ್ಡಮನಿ,ಹಣಮಂತ ಕುಡಹಳ್ಳಿ,ಅವಿನಾಶ್ ಕೊಡದೂರ್, ಮಂಜುನಾಥ ದಂಡಿನ, ಅನೇಕರು ಇದ್ದರು.
ವರದಿ : ಹಣಮಂತ ಕುಡಹಳ್ಳಿ

