ಕಿತ್ತೂರಿನ ತಹಶೀಲ್ದಾರ ಕಚೇರಿ ಮುಂದೆ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಬೇಟಿ ನೀಡಿ ಮಾತನಾಡಿ ರೈತರು ನಡೆಸುತ್ತಿರುವ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.

ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆ ಬಗ್ಗೆ ಭಾಲಚಂದ್ರ ಜಾಬಶೆಟ್ಟಿ ಅವರು ಮಾತನಾಡಿ ನಂದಿಕೃಷಿ. ನಂದಿ ಆದಾರಿತ ಉಳುಮೆಯಿಂದ ಸುಸ್ಥಿರ ಭೂಫಲವತ್ತತೆ ಕಾಯ್ದುಕೊಂಡು ಸುರಕ್ಷಿತ ಹಾಗೂ ಸುಸ್ಥಿರ ಆಹಾರ ಭದ್ರತೆಯನ್ನು ನಮ್ಮ ಪೂರ್ವಜರು ಹೊಂದಿದ್ದರು. ಆದರೆ ಈಗ ನಾವೆಲ್ಲರೂ ರಾಸಾಯನಿಕ ಕೃಷಿಯೆಡೆಗೆ ಆಕರ್ಷಿತಗೊಂಡಿರುವದರಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು. ಆಹಾರ ಉತ್ಪಾದನೆಯಲ್ಲಿ ಇಳುವರಿ ಹಾಗೂ ಗುಣಮಟ್ಟದಲ್ಲಿ ಕುಸಿತವಾಗಿದ್ದರಿಂದ ರೈತ ಸಂಕಷ್ಟಕೀಡಾಗುತ್ತಿದ್ದಾನೆ ಹಾಗಾಗಿ ನಂದಿಕೃಷಿಯ ಪುನರುತ್ಥಾನದ ಅವಶ್ಯಕತೆಯಿದ್ದು. ರೈತರು ಪುನಃ ನಂದಿಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವುದಕ್ಕಾಗಿ ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು. ರೈತ ಮುಖಂಡರಾದ ದಳವಾಯಿ ಅಪ್ಪೇಶ ಅವರು ಮಾತನಾಡಿದರು.
ವರದಿ:ಬಸವರಾಜ ಭಿಮರಾಣಿ.ಜಗದೀಶ ಕಡೋಲಿ

