ಬೆಂಗಳೂರು : ಬೆಂಗಳೂರಲ್ಲಿ ಕಳೆದ ಕೆಲವು ದಿನಗಳಿಂದ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆದಿದ್ದು ಈಗಾಗಲೇ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ಮುಗಿದಿದೆ.
ಇದೀಗ ಇಂದು ಬೆಂಗಳೂರಿನ ಶಿವಾಜಿನಗರದಲ್ಲಿ ಪಾಲಿಕೆ ಅಧಿಕಾರಿಗಳು ಫುಟ್ಪಾತ್ ತೆರವು ಕಾರ್ಯಾಚರಣೆ ಮಾಡುವ ವೇಳೆ ಪಾಲಿಕೆ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯ ಮುಖಂಡರಿಂದ ಹಲ್ಲೆ ನಡೆದಿದೆ. ಸ್ಥಳೀಯ ಸಂಘಟನೆ ಮುಖಂಡರು ಪಾಲಿಕೆ ಇಂಜಿನಿಯರ್ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ.
ಪಾಲಿಕೆ ಇಂಜಿನಿಯರ್ AE ರುಚಿತ ಮೇಲೆ ಸ್ಪ್ರೇ ಮೂಲಕ ಹಲ್ಲೆ ನಡೆಸಿದ್ದು, ಜೆಸಿಬಿ ಚಾಲಕನಿಗೆ ಹೆಲ್ಮೆಟ್ ಅಲ್ಲಿ ಹೊಡೆದಿದ್ದಾರೆ.
AE ಗೌತಮ್, AEE ಮಾಧವ ರಾವ್ ಸೇರಿದಂತೆ ಮೂರು ಜನ ಅಧಿಕಾರಿಗಳ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಥಳಿಸಿದ್ದಾರೆ. ಇದೀಗ ಈ ಒಂದು ವಿಡಿಯೋ ವೈರಲ್ ಆಗಿದೆ.


