Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಕಾಡಸಿದ್ದೇಶ್ವರ ಮಹಾರಥೋತ್ಸವ ನಿಮಿತ್ತ ಪ್ರಥಮ ಪುರಾಣ ಪ್ರವಚನ

Advertisement
ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕಾಡಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೀ ಗುರು ಕಾಡಸಿದ್ದೇಶ್ವರರ ಪವಾಡಗಳನ್ನು ಕುರಿತ ಪ್ರಥಮ ವರ್ಷದ 12ನೇ ದಿನದ ಪುರಾಣ ಪ್ರವಚನ ಕಾರ್ಯಕ್ರಮ ಗುರುವಾರ ರಾತ್ರಿ ಜರುಗಿತು.
ವೇದ ಮೂರ್ತಿ ಚಂದ್ರಯ್ಯ ಸ್ವಾಮಿ ಹಿರೇಮಠ ಅವರು ಮಾತನಾಡಿ ನೂರಾರು ವರ್ಷಗಳಿಂದ ಯುಗಾದಿ ಹಬ್ಬದಂದು ಜರುಗುತ್ತಾ ಬಂದಿರುವ ಮಹಾರಥೋತ್ಸವದಲ್ಲಿ ಹಲವಾರು ಪವಾಡ ಪುರುಷರು, ಶರಣರ ಪುರಾಣ ಪ್ರವಚನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಆದರೆ ಪ್ರಸಕ್ತ ವರ್ಷ ಕಾಡಸಿದ್ದೇಶ್ವರರ ಪವಾಡಗಳನ್ನೇ ಕುರಿತು ಶ್ರೀಮಠದ ಭಕ್ತಾದಿಗಳ ಆಸಕ್ತಿ ವಹಿಸಿ ನೀಡಿದ ದೇಣಿಗೆಯಿಂದ ಬಳಗಾನೂರು ವೇದ ಮೂರ್ತಿ ಶರಭಯ್ಯ ಶಾಸ್ತ್ರಿ ಅವರಿಂದ ರಚಿಸಿರುವ ಪುರಾಣ ಗ್ರಂಥವನ್ನು ರಚಿಸಲಾಗಿದೆ.
ಮಾರ್ಚ್ 16 ರಿಂದ ಪ್ರಾರಂಭವಾದ ಪುರಾಣವು ಮಾರ್ಚ್ 30ರ ಸಾಯಂಕಾಲ ಮಹಾಮಂಗಲವಾಗುತ್ತದೆ. ಪ್ರತಿದಿನ ಪುರಾಣ ಆಲಿಸಲು ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯಿರುತ್ತದೆ.

ಈ ಸಲ ನಡೆಯುವ ಅದ್ದೂರಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಆಗಮಿಸಿ ತಾತನವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ನಂ-64 ಹಳೇಕೋಟೆ ಗ್ರಾಮದ ವೇದ ಮೂರ್ತಿ ಭೈರಾಪುರ ಚಂದ್ರಮೌಳಿ ಶಾಸ್ತ್ರಿಗಳಿಂದ ನಡೆದ 12ನೇ ದಿನದ ಪ್ರವಚನದಲ್ಲಿ ವೇದ ಮೂರ್ತಿ ವೀರಭದ್ರಯ್ಯ ಗವಾಯಿಗಳು ಪಠಣೆ ಮಾಡಿದರು. ಸುಧಾಕರ ಅವರು ತಬಲ ಸಾಥ್ ನೀಡಿದರು. ಇದೇ ವೇಳೆ ದಾಸೋಹ ದಾನಿಗಳು ಶ್ರೀ ಮಠದ ಭಕ್ತರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ