ಸಿಂಧನೂರು : ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ನಿಲಯದ ವಿದ್ಯಾರ್ಥಿಗಳು ಬೆಳಗಿನ ಉಪಹಾರ ವೆಜ್ ಪಲಾವ್ ಸೇವಿಸಿ, ಸುಮಾರು 21 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪುಡ್ ಪಾಯಿಸನ್ ನಿಂದ ಹಸ್ತವ್ಯಸ್ತಗೊಂಡಿದ್ದು, ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಬಡವ ಹಾಗೂ ಮಾಧ್ಯಮ ವರ್ಗದ ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆರ್ಥಿಕವಾಗಿ ಹೊರೆ ಆದರೂ ಕೂಡ ಶಿಕ್ಷಣ ನೀಡಲು ಮುಂದಾಗುತ್ತಿದ್ದು, ಸ್ವಲ್ಪ ಮಟ್ಟಿಗಾದರೂ ಆರ್ಥಿಕ ಹೊರೆ ತಗ್ಗಲಿ ಎಂದು ತಮ್ಮ ಮಕ್ಕಳನ್ನು ವಸತಿ ನಿಲಯಕ್ಕೆ ಸೇರ್ಪಡೆ ಗೊಳಿಸುತ್ತಿದ್ದು, ಆದರೆ ಒಳಬಳ್ಳಾರಿ ರಸ್ತೆಯ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಇರುವ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯದ ವಾರ್ಡನ್ ಹಾಗೂ ಸಂಬಂಧಪಟ್ಟ ಅಡುಗೆದಾರರ ದಿವ್ಯ ನಿರ್ಲಕ್ಷತನದಿಂದಾಗಿ ಗುರುವಾರ ಬೆಳಿಗ್ಗೆ ವಿದ್ಯಾರ್ಥಿನಿಯರು ವೆಜ್ ಪಲಾವ್ ಸೇವಿಸಿ, ವೆಜ್ ಪಲಾವಿನಲ್ಲಿ ಬಾಲು ಹುಳಗಳು ಪತ್ತೆಯಾಗಿ, ವಿದ್ಯಾರ್ಥಿಗಳಿಗೆ ಫುಡ್ ಪಾಯಿಜನ್ ಆದ ಪರಿಣಾಮ ಅಸ್ವಸ್ಥಕ್ಕೊಂಡು ಸುಮಾರು 21 ಅಧಿಕ ವಿದ್ಯಾರ್ಥಿಗಳು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ,
ಈ ಒಂದು ಘಟನಸ್ಥಳಕ್ಕೆ ಬಿಜೆಪಿ ಪಕ್ಷದ ಮುಖಂಡ ಕೆ. ಕರಿಯಪ್ಪ ಭೇಟಿ ನೀಡಿ, ಕಳಪೆ ಮಟ್ಟದ ಆಹಾರದಿಂದ ಈ ದುರ್ಘಟನೆ ನಡೆದಿದ್ದು, ಕೂಡಲೆ ಸಂಬಂಧಪಟ್ಟ ವಾರ್ಡನ್ ಒಳಗೊಂಡಂತೆ ಅಡುಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಂಡು ಮತ್ತು ಶಾಸಕರುಗಳ ಬೆಂಬಲಿಗರು ಕಳಪೆ ಫುಡ್ ಮತ್ತು ತರಕಾರಿ ಸಪ್ಲೈ ಮಾಡುತ್ತಿದ್ದು ಕೂಡಲೇ ಅವರ ಟೆಂಡರ್ ಲೈಸೆನ್ಸ್ ರದ್ದು ಪಡಿಸಬೇಕು ಎಂದು ಮಾಧ್ಯಮಗಳ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ : ಬಿಜೆಪಿ ಮುಖಂಡರಾದ ಸಿದ್ದರಾಮೇಶ್ ಮುನ್ನಾಪುರ. ಹಸೇನಪ್ಪ ಸೂಲಂಗಿ. ಮುತ್ತು ಬರ್ಸಿ. ರಾಜು ಅಡಿವಿಬಾವಿ ಮುಖಂಡರಾದ ಬಸವರಾಜ ಬಡಿಗೇರ್. ವೀರೇಶ್ ಬಾವಿಮನಿ. ರುದ್ರಗೌಡ ಹನುಮಂತ ಕರ್ನಿ ವಿನೋದ್ ಗಿಣಿವಾರ. ಮಲ್ಲಿಕಾರ್ಜುನ್ ಕುನ್ನಟಗಿ ದುರ್ಗೇಶ್ ಕಲ್ಮಂಗಿ ಸೇರಿದಂತೆ ಅನೇಕರು ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ


