Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಂದಿಗಢ ವಿರುದ್ಧ ಗೆದ್ದ ಕರ್ನಾಟಕಕ್ಕೆ ಪೂರ್ಣ ಪಾಯಿಂಟ್

Advertisement
----------------------------------------------ರಣಜಿ ಕ್ರಿಕೆಟ್ ಪಂದ್ಯಾವಳಿ ಎಲೈಟ್ ಬಿ’ ಗುಂಪು

--------------------------------5 ಪಂದ್ಯಗಳಿಂದ 21 ಪಾಯಿಂಟ್: ಬಿ, ಗುಂಪಿನಲ್ಲಿ ಅಗ್ರಸ್ಥಾನ



--ಪಂದ್ಯದಲ್ಲಿ 10 ವಿಕೆಟ್ ಪಡೆದ ಶ್ರೇಯಸ್ ಗೋಪಾಲ್

ಹುಬ್ಬಳ್ಳಿ: ಕರ್ನಾಟಕ ಕ್ರಿಕೆಟ್ ತಂಡವು ಚಂದಿಗಢ ವಿರುದ್ಧ ಇಲ್ಲಿ ನಡೆದ ಎಲೈಟ್ ಬಿ, ಗುಂಪಿನ ಲೀಗ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 185 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪೂರ್ಣ 7 ಪಾಯಿಂಟ್ ಗಳನ್ನು ಸಂಪಾದಿಸಿ ಒಟ್ಟು 21 ಅಂಕಗಳ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿಯಿತು.

ಇಲ್ಲಿನ ಕೆ.ಎಸ್.ಸಿ. ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಇಂದು ಚಂದಿಗಢ ತಂಡವನ್ನು  ಅದರ ದ್ವಿತೀಯ ಇನ್ನಿಗ್ಸ್ ನಲ್ಲಿ 140 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಕರ್ನಾಟಕದ ಬೌಲರುಗಳು ಯಶಸ್ವಿಯಾದರು. ಕರ್ನಾಟಕದ 8 ವಿಕೆಟ್ ಗೆ 547 ಡಿಕ್ಲೇರ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ನಲ್ಲಿ 222  ರನ್ ಗಳಿಗೆ ಆಲೌಟ್ ಆದ ಚಂದಿಗಢ ತಂಡವು ಫಾಲೋ ಆನ್ ಪಡೆದು ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 140 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಾಗೂ 185 ರನ್ ಗಳಿಂದ ಪರಾಭವಗೊಂಡಿತು.

ಕರ್ನಾಟಕ  ಈ ಪಂದ್ಯದಲ್ಲಿ ಪೂರ್ಣ ಏಳು ಪಾಯಿಂಟ್ ಗಳನ್ನು ಪಡೆಯುವ ಮೂಲಕ ಒಟ್ಟು ತಾನಾಡಿದ 5 ಲೀಗ್ ಪಂದ್ಯಗಳಿಂದ 21  ಅಂಕಗಳನ್ನು ಪಡೆದು ಬಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು. 17 ಅಂಕಗಳನ್ನು ಪಡೆದ ಮಹಾರಾಷ್ಟ್ರ ದ್ವಿತೀಯ ಹಾಗೂ ಮಧ್ಯ ಪ್ರದೇಶ 15  ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದೆ.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನ್ನಿಂಗ್ಸ್ 8 ವಿಕೆಟ್ ಗೆ 547 ಡಿಕ್ಲೇರ್

ಚಂದಿಗಢ ಮೊದಲ ಇನ್ನಿಂಗ್ಸ್ 222 ( ಮನನ್ ವೋರಾ 106 ), ಶ್ರೇಯಸ್ ಗೋಪಾಲ್ 73 ಕ್ಕೆ 7)

ಶಿಖರ್ ಶೆಟ್ಟಿ 43 ಕ್ಕೆ 2),

ಚಂದಿಗಢ ಫಾಲೋ ಆನ್ ನಲ್ಲಿ 140 ( ಶಿವಂ ಬಂಬಾರಿ 43, ರಾಜ್ ಬವಾ 27,  ಶಿಖರ್  ಶೆಟ್ಟಿ 61 ಕ್ಕೆ 5)

ಶ್ರೇಯಸ್ ಗೋಪಾಲ್ 45 ಕ್ಕೆ 3)

ಪಂದ್ಯ ಶ್ರೇಷ್ಠ: ಸಮರನ್ ರವಿಚಂದ್ರನ್

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ