
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಿಳೆ ಹಾಗೂ ಪುರುಷ ಭಕ್ತರಿಗೆ ಗುಗ್ಗರಿ ಹಾಗೂ ಬೆಲ್ಲ ಶುಂಠಿ ಹಂಚಲಾಯಿತು ಮುತ್ತೈದೆಯರಿಂದ ತೊಟ್ಟಿಲು ಗೀತೆಗಳೊಂದಿಗೆ ಸಿದ್ಧಿವಿನಾಯಕ ಗಣೇಶನಿಗೆ ಜೈ ಜೈ ವಾಗಲೆಂದು ಘೋಷಣೆ ಕೂಗಿ ಪುಷ್ಪವೃಷ್ಟಿ ಮಾಡಲಾಯಿತು ತದನಂತರ ಮಹಾಪೂಜೆಯ ಬಳಿಕ ಉಪಸ್ಥಿತರಿದ್ದ ಸದ್ಭಕ್ತರಿಗೆ ಮಹಾಪ್ರಸಾದ ಹಂಚಲಾಯಿತು. ಸಾವಿರಾರು ಭಕ್ತರು ಇದರ ಲಾಭ ಪಡೆದುಕೊಂಡರು ಗಣೇಶ ಜಯಂತಿ ಉತ್ಸವದಲ್ಲಿ ಉತ್ಸವ ಕಮಿಟಿಯ ಸದಸ್ಯರಾದ ಪ್ರಕಾಶ ತಾರದಾಳೆ ಬಾಳಸಾಹೇಬ ಶಿಂದೆ ಅನಗೌಡ ಪಾಟೀಲ ರವಿ ದೇಸಾಯಿ ಗಜಾನನ್ ಪಾಟೀಲ ರಾಮಾ ಗುರವ ಜಾಲಿಂದರ ಖರಾತ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ

