Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ಯಪ್ರಿಯರಿಗೆ ಸಂತಸದ ಸುದ್ದಿ : ಸ್ಕಾಚ್, ವಿಸಿ ದರದಲ್ಲಿ ಭಾರೀ ಇಳಿಕೆ 

Advertisement

ಮದ್ಯಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಯಾದ ಹಿನ್ನೆಲೆಯಲ್ಲಿ ಸ್ಕಾಚ್ ವಿಸ್ಕಿ ಹಾಗೂ ಜಿನ್ ಮೇಲಿನ ಆಮದು ಸುಂಕವನ್ನು 150%ರಿಂದ 75%ಕ್ಕೆ ಇಳಿಸಲಾಗಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ಪ್ರೀಮಿಯಂ ಸ್ಕಾಚ್ ವಿಸ್ಕಿ ಬೆಲೆ 15ರಿಂದ 20 ಶೇಕಡಾವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ.

150 ರಿಂದ ನೇರವಾಗಿ ಶೇ. 75 ಕ್ಕೆ ತಗ್ಗಿಸಲಾಗಿದೆ.

ಅಷ್ಟೇ ಅಲ್ಲದೆ, ಮುಂಬರುವ 10 ವರ್ಷಗಳಲ್ಲಿ ಈ ಆಮದು ಸುಂಕವನ್ನು ಹಂತ ಹಂತವಾಗಿ ಶೇ. 40 ಕ್ಕೆ ಇಳಿಸುವ ಬೃಹತ್ ಯೋಜನೆಯನ್ನೂ ರೂಪಿಸಲಾಗಿದೆ.

ಬೆಲೆ ಎಷ್ಟು ಕಡಿಮೆಯಾಗಬಹುದು?

ಸರಕು ಮತ್ತು ವ್ಯಾಪಾರ ವಲಯದ ತಜ್ಞರ ಪ್ರಕಾರ, ಈ ಸುಂಕ ಕಡಿತದಿಂದಾಗಿ ಪ್ರೀಮಿಯಂ ಸ್ಕಾಚ್ ವಿಸ್ಕಿ ಬೆಲೆಗಳಲ್ಲಿ ಶೇ. 15 ರಿಂದ 20 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

ಇದರಿಂದ ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿದೇಶಿ ಬ್ರ್ಯಾಂಡ್‌ಗಳು ಲಭ್ಯವಾಗಲಿದ್ದು, ದೇಶೀಯ ಪ್ರೀಮಿಯಂ ವಿಸ್ಕಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಇನ್ನಷ್ಟು ಹೆಚ್ಚಾಗಲಿದೆ.

ಆಮದು ಸುಂಕ ಕಡಿಮೆಯಾಗಿದ್ದರೂ, ಮದ್ಯದ ಅಂತಿಮ ಚಿಲ್ಲರೆ ಬೆಲೆಯನ್ನು ನಿರ್ಧರಿಸುವಲ್ಲಿ ಆಯಾ ರಾಜ್ಯ ಸರ್ಕಾರಗಳ ಅಬಕಾರಿ ಸುಂಕ (Excise Duty), ವ್ಯಾಟ್ (VAT), ಸಾಗಣೆ ವೆಚ್ಚ ಮತ್ತು ವಿತರಕರ ಕಮಿಷನ್ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಸುಂಕ ಕಡಿತದ ಪೂರ್ಣ ಪ್ರಯೋಜನವು ಗ್ರಾಹಕರಿಗೆ ತಕ್ಷಣವೇ ಸಿಗದೇ ಇರಬಹುದು ಎಂದು ವಿಶ್ಲೇಷಿಸಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದಿನ ಶಕ್ತಿ ಗುರು : ಗಂಗಾಧರ ದೇವರಮನೆಜನಧ್ವನಿಗೆ ಲೇಖನಿಯೇ ಶಕ್ತಿ; ಸಮಾಜದ ಸಮಸ್ಯೆಗಳಿಗೆ ಪತ್ರಕರ್ತರು ಸ್ಪಂದಿಸಬೇಕು : ಪ್ರಕಾಶ ಖಂಡ್ರೆನಿಸ್ವಾರ್ಥ ಸೇವೆ ಸಲ್ಲಿಸಿದರೆ ಶ್ರೇಯಸ್ಸು, ಆಯಸ್ಸು ಹೆಚ್ಚಳ : ಬಿಳಿಗೆರೆ ಶಿವಕುಮಾರ್ಏಳು ಮಕ್ಕಳ ತಾಯಿ ದೇವಸ್ಥಾನದ  ಪುರಾತನ  ಬ್ರದ್ದಾಕಾರದ ಮರವಂದಕ್ಕೆ ಆಕಸ್ಮಿಕ ಬೆಂಕಿಇಂದಿನಿಂದ ಮಧ್ಯವರ್ಜನ ಶಿಬಿರಆಡಳಿತದ ಎಲ್ಲಾ ಸ್ಥಳಗಳಲ್ಲಿ ಕನ್ನಡ ಭಾಷೆ ಅನುಷಾನಗೊಳಿಸಲು ಸರ್ಕಾರ ಬದತೆ ತೋರಲಿಮದ್ಯಪ್ರಿಯರಿಗೆ ಸಂತಸದ ಸುದ್ದಿ : ಸ್ಕಾಚ್, ವಿಸಿ ದರದಲ್ಲಿ ಭಾರೀ ಇಳಿಕೆ ಶಿರಗುಪ್ಪಿ ಪ್ರೌಡಶಾಲೆ ಮುಖ್ಯೋಪಾಧ್ಯಾಯರ ಮೇಲೆ ಕ್ರಮಕೆ ಮನವಿದೇಶದ ಜನತೆಗೆ ದೊಡ್ಡ ರಿಲೀಫ್ : ಇಂದಿನಿಂದ 22 ಔಷಧಗಳ ಹೊಸ ಬೆಲೆ ಜಾರಿಜಾಮೀನು ಸಿಕ್ಕ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್