Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರಿ ಗಾಳಿ ಮಳೆಯಿಂದ ನೆಲಕಚ್ಚಿದ ಭತ್ತದ ಬೆಳೆ ನಾಶ

Advertisement
ಸಿರಿಗೇರಿ: ಇಲ್ಲಿನ ಸಮೀಪದ ದಾಸಪುರ ಗ್ರಾಮದ ಮಂಗಳವಾರ ಸಂಜೆ ಭಾರಿ ಗಾಳಿ ಮಳೆ ಸುರಿದ ಪರಿಣಾಮದಿಂದ 30 ರಿಂದ40 ಎಕರೆ ಭತ್ತದ ಬೆಳೆಯುವ ನೆಲಕಚ್ಚಿದ ನಾಶವಾಗಿದೆ. ಈ ಬೆಳೆಯು ಇನ್ನೇನು 10 ರಿಂದ12 ದಿನದಲ್ಲಿ ಕೊಯ್ಲು ಮಾಡಬೇಕಾಗಿತ್ತು. ಏಕಾಏಕಿ ಭಾರಿ ಮಳೆಯಿಂದ ಬೆಳೆ ನಾಶಕ್ಕೆ ಒಳಭಾಗ ರೈತರುಗಳಾದ ಟಿ ಚಂದ್ರಪ್ಪ, ಬಿ ಹನುಮಂತಪ್ಪ, ಪಿ ರುದ್ರಪ್ಪ, ಪಿ ಲವಣ್ಣ, ಗುಡಿಸಲಿ ಶೇಷಪ್ಪ, ಶಾನವಾಸಪುರ ಹನುಮಯ್ಯ, ಪೂಜಾರಿ ದ್ಯಾವಣ್ಣ, ಗುಡಿಸಲಿ ಈರಣ್ಣ ಈ ಮಳೆಯಿಂದ ಅವಾಂತರಗೊಂಡ ರೈತರು ಕಂಗಲಾಗಿ ತೋಚದಂತಾಗಿದೆ ಎಂದು ಹೇಳಿಕೊಂಡರು.



ಅದೇ ರೀತಿ ಸಿರಿಗೇರಿ ಗ್ರಾಮದ 3 ನೇ ವಾರ್ಡಿನಲ್ಲಿ ಕೇವಲ ಅರ್ಧಗಂಟೆಯಲ್ಲಿ ಜೋರಾದ ಮಳೆ ಸುರಿದಿದ್ದರಿಂದ ಗ್ರಾಮದ ಎಲ್ಲಾ ಚರಂಡಿಗಳ ನೀರು, ಕೆರೆ ನೀರು ಸೇರಿ ಕಾಲುವೆಯಂತೆ ಹರಿದು, ದ್ವಿಚಕ್ರ ವಾಹನಗಳು ಭಾಗಶಹ ಮುಳಗಿದ್ದವು, ಹಬ್ಬದ ವಾತಾವರಣ ಇರುವುದರಿಂದ ಗ್ರಾಹಕರು ಅಂಗಡಿಗಳ ಪೂಜೆ ಕೈಂಕಾರ್ಯ ಗಳಿಗೆ ಹೂ, ಹಣ್ಣು,ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುವಲ್ಲಿ ನಿರತರಾಗಿದ್ದರು.

ಕೆಲ ಕಾಲ ಜನಜೀವನ ಅಸ್ತವ್ಯಸ್ತಗೊಳಿಸಿತು. 3 ನೇ ವಾರ್ಡಿನ ರಸ್ತೆಯಲ್ಲಿ ಭಾರಿ ನೀರು ಸೇರಿದ್ದರಿಂದ ತಾಯಿಯು ಮಗನನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುವ ದೃಶ್ಯವು ಮನಕಲುಕುವಂತಿತ್ತು.

ಅಲ್ಲಿನ ನಿವಾಸಿಗಳು ಅನೇಕ ಬಾರಿ ಶಾಸಕರಿಗೆ, ಜಿ ಪಂ ಸಿಇಒಗೆ, ಗ್ರಾಮ ಪಂಚಾಯಿತಿಯ ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದರು ಈ ಕೆಲಸಕ್ಕೆ ಅನುದಾನ ಹೆಚ್ಚು ಬೇಕು ಮಾಡುವುದಕ್ಕೆ ಆಗುವುದಿಲ್ಲ ಎಂದು ನುಳಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೇ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ಮುಂದಿನ ದಿನಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲವೆಂದರೆ ಅಲ್ಲಿ ನಿವಾಸಿಗಳು ಅವರಿಗೆ ತಕ್ಕ ಪಾಠ ಕಲಿಸುವುದಂತು ನಿಜ.

ವರದಿ: ಶ್ರೀನಿವಾಸ ನಾಯ್ಕ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ