ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಅವರಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸವಾದಿ ತಾಲೂಕುಘಟಕದಿಂದ ಮುಖ್ಯಮಂತ್ರಿಗಳಿಗೆ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಸಿ.ಪಿ.ಐ.ಎಂ. ತಾಲೂಕು ಕಾರ್ಯದರ್ಶಿ ಹೆಚ್.ಶರ್ಪುದ್ದೀನ್ ಪೋತ್ನಾಳ್ ಮಾತನಾಡಿ ಜಿಲ್ಲೇಯ ಹೊಕ್ರಾಣಿ ಗ್ರಾಮದ ಅಶ್ವಿನಿ, ಕರಡಕಲ್ ಗ್ರಾಮದ ರಾಣೇಮ್ಮ ಎನ್ನುವ ಮಹಿಳೆಯ ಮೇಲೆ ಅತ್ಯಾಚಾರ ,ಕೊಲೆ ಮತ್ತು ಹದ್ದಿನಾಳ ಗ್ರಾಮದ ಭೂಮನಂದ ಕೊಲೆ ಪ್ರಕರಣವನ್ನು ಕೂಡಲೇ ಸಿ.ಐ.ಡಿ ತನಿಖೆಗೆ ನಡೆಸಿ ಆರೋಪಿಗಳಿಗೆ ಕಾನೂನು ಪ್ರಕರ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ಥರ ಕುಟುಂಬಕ್ಕೆ ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು ಜೊತೆಗೆ ಕುಟುಂಬ ಸದಸ್ಯರ ಒಬ್ಬರಿಗೆ ಸರ್ಕಾರಿ ಉದ್ಯೋಗ ಪ್ರತಿ ಕುಟುಂಬಕ್ಕೆ 5ಎಕರೆ ಜಮೀನು ಮಂಜೂರು ಮಾಡಬೇಕು. ಪ್ರತಿ ತಿಂಗಳು ಪ್ರತಿ ಜಿಲ್ಲೇಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ದಲಿತರ ಕುಂದುಕೊರತೆಗಳ ಸಭೆಗಳನ್ನು ನಡೆಸಬೇಕು. ಅಕ್ರಮ ಮಧ್ಯಪಾನ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು.ರಾಯಚೂರು ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅಗತ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ ಅಗತ್ಯ ಮೂಲಕ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು,
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿ.ಪಿ.ಐ.ಎಂ. ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿಮನವಿ ಸಲ್ಲಿಸಿದರು.
ರುದ್ರಪ್ಪ ನಾಯಕ , ಆಂಜನೇಯ್ಯ ಕೋಟೆ, ವೆಂಕಟೇಶ,ಶಾಂತಕುಮಾರ, ಶ್ರೀನಿವಾಸ ಟೈಲ್ಸ್,ಎಂ.ಡಿ.ಇಮಾಮ್,ರಾಮಣ್ಣ ಎಸ್. ರಹೀಮಾನ್. ಹನುಮಂತ,ದುರುಗಪ್ಪ ,ಆಯ್ಯಣ್ಣ,ರಫೀ,ದೇವಪ್ಪ,ಶಿವುಕುಮಾರ,ಬಸವರಾಜ,ತಿಮ್ಮಯ್ಯ,ಹನುಮೇಶ, ರಮೇಶ,ಸೇರಿದಂತೆ ಇನ್ನಿತರರು ಇದ್ದರು.
ವರದಿ : ಆಂಜನೇಯ ನಸಲಾಪುರ


