Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ದಿವ್ಯ ಗುಣಗಳಿಂದ ದೇವಮಾನವ ರಾಗಲು ಸಾಧ್ಯ'

Advertisement
ಬಸವನಬಾಗೇವಾಡಿ: ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಭಾನುವಾರ ಬಸವ ಭವನದಲ್ಲಿ ನೂತನ ಕಟ್ಟಡದ ಭೂಮಿ ಪೂಜೆ, ಬಿ ಕೆ ಅಂಬಿಕಾ ಅಕ್ಕನವರ ಅಮೃತ ಮಹೋತ್ಸವ ಹಾಗೂ ಸಮರ್ಪಿತ ಸಹೋದರಿ ಸಹೋದರರ ಶಷ್ಟಬ್ದಿ ಸಮಾರಂಭ ಜರುಗಿತು.

ಸನ್ಮಾನ ಸ್ವೀಕರಿಸಿ ಬಿ.ಕೆ ಅಂಬಿಕಾ ಅಕ್ಕನವರು ಮಾತನಾಡಿ, ಪಟ್ಟಣದ ಬೋಜಪ್ಪ ಹೊಸಮನಿ ಪರಿವಾರದಲ್ಲಿ ಪದ್ಮಾ ಅಕ್ಕ ಹಾಗೂ ಪ್ರಕಾಶ ಅಣ್ಣ ಸೇರಿದಂತೆ ಅವರ ಪರಿವಾರವೇ ಪೂರ್ಣ ಪ್ರಮಾಣದಲ್ಲಿ ಭಗವಂತನ ಸೇವೆ ಮಾಡುವ ಮೂಲಕ ಇದೀಗ ನೂತನ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪ್ರಕಾಶ್ ಅಣ್ಣಾ ಮಾತನಾಡಿ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಸೇವೆ ವಿಸ್ತರಿಸಬೇಕಾಗಿದೆ.

ನೂತನ ಕಟ್ಟಡಕ್ಕೆ ಸಚಿವ ಶಿವಾನಂದ ಎಸ್ ಪಾಟೀಲ ಅವರ ಸಹಕಾರ ಅಗತ್ಯವಾಗಿದೆ ಎಂದರು. ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಭಾವನೆ ಶುದ್ಧ ಇದ್ದಲ್ಲಿ ಮಾತ್ರ ಭಗವಂತನ ಸೇವೆ ಹಾಗೂ ಒಲುಮೆ ಸಾಧ್ಯ ಎಂದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ.ವೈ ಬಸಾಪುರ್, ಬಿಕೆ ಸುರೇಖಾ ಅಕ್ಕ ಸೇರಿದಂತೆ ಅನೇಕ ಮಾತನಾಡಿದರು.

ಈ ಸಂದರ್ಭದಲ್ಲಿ ಭಾವನಾ, ಶಶಿಕಲಾ, ಶಾಂತಾ, ಬೇಬಿ, ಸುಲೋಚನಾ ಅಕ್ಕ ಸೇರಿದಂತೆ ಅನೇಕ ಅಕ್ಕಂದಿರು, ಮಹಾವೀರ್ ಹೊಸಮನಿ, ಸಿದ್ದಣ್ಣ ಕಲ್ಲೂರ್, ಎಚ್. ಎಸ್ ಗುರಡ್ಡಿ ಸೇರಿದಂತೆ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವ ಜಿಲ್ಲೆಯ ವಿವಿಧ ವಿವಿ ಗಳಿಂದ ದೈವಿ ಪರಿವಾರದವರು ಆಗಮಿಸಿದ್ದರು.

ಅರ್ಚನ ಮುಳ್ಳೂಳ್ಳಿ ಅದ್ವಿಕಾ, ಈಶ್ವರಿ ಮನಗೂಳಿ ಅವರಿಂದ ನಡೆದ ನೃತ್ಯ ಪ್ರೇಕ್ಷಕರ ಮನ ಸೆಳೆಯಿತು. ಬಸವರಾಜ್ ಪಾಟೀಲ್ ಹಾಗೂ ರೇಣುಕಾ ಅಕ್ಕ ನಿರೂಪಿಸಿದರು. ಬಸವರಾಜ ಶಿವಣಗಿ ಪ್ರಾರ್ಥಿಸಿದರು ಕಾರ್ಯಕ್ರಮದ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಶಾಂತಿ ಯಾತ್ರೆ ಜರುಗಿತು. ರಥಯಾತ್ರೆ ಮುನ್ನ ಪಟ್ಟಣದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೇರವೇರಿಸಲಾಯಿತು.

ವರದಿ: ಗುರುರಾಜ್. ಬ. ಕನ್ನೂರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ