Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು ನಾಶಗೊಳಿಸಿ ಸದ್ಗುಣಗಳೊಂದಿಗೆ ಶಾಂಭವಿಯ ಕೃಪೆ ಪಡೆದು ದೇವ ಮಾನವನಾಗಲು ಸಾಧ್ಯ :ಸಿದ್ದಯ್ಯ ಸ್ವಾಮಿ

Advertisement
ಮುದಗಲ್ಲ:  ಪಟ್ಟಣದ ಸಾಲಿಮಠದಲ್ಲಿ ನವರಾತ್ರಿ ಉತ್ಸವದಂಗವಾಗಿ ಹಮ್ಮಿಕೊಂಡ ಶ್ರೀಶಾಂಭವಿ ಮಾತೆಯ
ದೇವಿ ಪುರಾಣ ಪ್ರವಚನವು ಸಾಲಿಮಠದ ಸಿದ್ದಯ್ಯ ಸ್ವಾಮಿ ಸಾನಿಧ್ಯದಲ್ಲಿ ವಿಜಯ ದಶಮಿ ಪ್ರಯುಕ್ತ 9 ದಿನಗಳ ವರೆಗೂ ಪ್ರತಿ ದಿನ ಸಂಜೆ 7 ರಿಂದ 9:30 ಗಂಟೆ ವರಗೆ ನಡೆಯುವ ಶಾಂಭವಿ ಮಾತೆಯ ಪುರಾಣ ಪಠಣ ಶುಕ್ರವಾರವು ಮಾತೆಯ ಶ್ರದ್ಧಾ ಭಕ್ತಿ ಯಿಂದ ವೇದ ಘೋಷಗ ಳೊಂದಿಗೆ ಆರಂಭ ವಾಯಿತು.



ಸಾಲಿಮಠದ ಸಿದ್ದಯ್ಯ ಸ್ವಾಮಿ ಈ ಪುರಾಣದಲ್ಲಿ ದೇವಿ ಮಹಾತ್ಮೆ ಪುರಾಣ ಪ್ರವಚನದಲ್ಲಿ ಮಾತನಾಡಿದರು ಶ್ರೀದೇವಿಯು ದುರ್ಗುಣಗಳ ಆಗರವಾದ ರಕ್ಕಸರನ್ನು ಸಂಹಾರ ಮಾಡಿ ಶಿಷ್ಟರನ್ನು ಸಂರಕ್ಷಿಸಿ ಧರ್ಮ ಸ್ಥಾಪಿಸಿ ಲೋಕ ಕಲ್ಯಾಣ ಮಾಡಿದಳು ಸುಜ್ಞಾನವೆಂದರೆ ದೇವಿ ಹಾಗೂ ಅಜ್ಞಾನವೆಂದರೆ ರಾಕ್ಷಸರು ಇವರಿಬ್ಬರ ನಡುವೆ ನಡೆದ ಧರ್ಮ ಯುದ್ದವೇ ಪುರಾಣದಲ್ಲಿ ಬರುವ ಪ್ರತಿಯೊಂದು ಅಧ್ಯಾಯದ ಸಾರಂಶವಾಗಿದೆ
ದೇವಿ ಪುರಾಣ ದೇಹದ ಪುರಾಣವಿದ್ದಂತೆ
ದೇವಿ ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ಮಹಾನ್‌ ಶಕ್ತಿ ದೇವತೆಯಾಗಿದ್ದಾಳೆ. ಪುರಾಣವೆಂದರೆ ದೇಹದ ಪುರಾಣವಿದ್ದಂತೆ ದೇಹ ದಲ್ಲಿರುವ ಅವಗುಣಗಳನ್ನು ಕಳೆಯುವುದೇ ರಾಕ್ಷಸ ಸಂಹಾರವಿದ್ದಂತೆ ನಮ್ಮಲ್ಲಿ ಇರುವ ದುರ್ಗುಣಗ ಳಾದ ಕಾಮ, ಕ್ರೋಧ, ಮೋಹ, ಮದ, ಮತ್ಸರಗಳನ್ನು ಕಳೆದು ನಮ್ಮಲ್ಲಿಪ್ರೀತಿ,ವಿಶ್ವಾಸ,
ನಂಬಿಕೆ, ಸಂತೋಷ, ಧಾರ್ಮಿಕತೆ ಬೆಳೆಸುತ್ತದೆ ಎಂದರು

ಅದರಂತೆ ಈರಪ್ಪ ಹಡಪದ ಅವರು ಪುರಾಣದಲ್ಲಿ ಸುಜ್ಞಾನ ಮತ್ತು ಅಜ್ಞಾನದ ನಡುವೆ ನಡೆಯುವ ಯುದ್ಧವೇ ದೇವಿ ಪುರಾಣದಲ್ಲಿ ಬರುವ ಮುಖ್ಯಾಂಶವಾಗಿದ್ದು ಶ್ರದ್ಧೆಯಿಂದ ಪುರಾಣ ಆಲಿಸಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಶಾಂಭವಿ ಸದ್ಭಕ್ತ ಮಂಡಳಿ,ಹಾಗೂ ಭಕ್ತರಿದ್ದರು ಉಪಸ್ಥಿತ ರಿದ್ದರು.

ವರದಿ: ಮಂಜುನಾಥ ಕುಂಬಾರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ