4 ಎಕರೆ 28 ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿರಲಿಲ್ಲ.

ಕಚೇರಿಗೆ ಅಲೆದು ಸುಸ್ತಾಗಿ ರೈತರು ನ್ಯಾಯಾಲಯದ ಮೊರೆ ಹೋಗಿ. 43,33,306 ಲಕ್ಷ ರೂಪಾಯಿ ಪರಿಹಾರ ನೀಡುವಂತೆ
ಜಮಖಂಡಿ ಹಿರಿಯ ದಿವಾಣಿ ನ್ಯಾಯಾಲಯ ಆದೇಶ ಮಾಡಿತ್ತು.

ನ್ಯಾಯಾಲಯದ ಆದೇಶದ ಬಳಿಕವೂ ಪರಿಹಾರ ನೀಡದ ಅಧಿಕಾರಿಗಳು, ಹೀಗಾಗಿ ಅಧಿಕಾರಿಗಳ ವಾಹನ, ಕಚೇರಿ
ಪೀಠೋಪಕರಣ ಸೇರಿದಂತೆ ಚರಾಸ್ತಿ ಮುಟ್ಟುಗೋಲಿಗೆ ಕೋರ್ಟ್ ನೀಡಿರುವದರಿಂದ ಜಪ್ತಿ ಮಾಡಲು ಬಂದಾಗ ಉಪವಿಭಾಧಿಕಾರಿಗಳ ಕಚೇರಿ ಬೀಗ ಹಾಕಿರುವದರಿಂದ ಎಸಿ ಅವರ ವಾಹನವನ್ನು ಜಪ್ತಿ ಮಾಡಲು ಹೋದಾಗ ಕೀಲಿಕೖ ನೀಡದ ಕಾರಣ ವಾಹನವನ್ನು ಟೋ ವಾಹನ ಮುಖಾಂತರ ಎಳೆದುಕೊಂಡು ಹೋದರು.
ಈ ಸಮಯದಲ್ಲಿ ನ್ಯಾಯಾಲಯದ ಸಿಬ್ಬಂದಿ ಹಾಗೂ ನ್ಯಾಯವಾದಿಗಳು ಇದ್ದರು.
ವರದಿ : ಬಂದೇನವಾಜ ನದಾಫ

