Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನದಿ ಸ್ನಾನಕ್ಕೆ ತೆರಳಿದ ಕಕಮರಿ ಅಮ್ಮಾಜೇಶ್ವರಿ ದೇವಿ

Advertisement
ಐಗಳಿ: ಕಕಮರಿ ಗ್ರಾಮ ದೇವತೆ ಶ್ರೀ ಅಮ್ಮಾಜೇಶ್ವರಿ ದೇವಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಝಂಜರವಾಡ ನದಿ ಸ್ನಾನಕ್ಕೆ ಕಾಲ್ನಡಿಗೆ ಮೂಲಕ ರವಿವಾರ ತೆರಳಿದರು. ಅಥಣಿ ತಾಲೂಕಿನ ಕಕಮರಿ ಗ್ರಾಮದ ಶ್ರೀ ಅಮ್ಮಾಜೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ವಿವಿಧ ಕಲಾ ತಂಡದೊಂದಿಗೆ ಸಡಗರ ಸಂಭ್ರಮದಿಂದ ಐಗಳಿ ಗ್ರಾಮದಲ್ಲಿ ಸಂಜೆ ಜರುಗಿತು.

ಕಕಮರಿ ಯಿಂದ ಮುಂಜಾನೆ 11 ಗಂಟೆಗೆ ತೆರಳಿ ಕೇಸಕ್ಕದಡ್ಡಿ ಮಾರ್ಗವಾಗಿ ಐಗಳಿ ಗ್ರಾಮಕ್ಕೆ ಆಗಮಿಸಿ ಬಾಡಗಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು. ನದಿ ಸ್ಥಾನಕ್ಕೆ ಗ್ರಾಮದ ಪ್ರತಿಯೊಂದು ಮನೆಯ ಅವರು ಜಾತಿ ಧರ್ಮ ಮರೆತು ಭಾಗವಹಿಸಿ ಸಾವಿರಾರು ಜನರು ದೇವಿ ಜೊತೆಗೆ ಕಾಲ್ನಡಿಗೆ ಹೆಜ್ಜೆ ಹಾಕುತ್ತಾ ಸಾಗಿದರು.

[video width="848" height="478" mp4="https://bharathvaibhav.com/wp-content/uploads/2025/05/WhatsApp-Video-2025-05-11-at-8.09.20-PM.mp4"][/video]

ನೂರಾರು ಎತ್ತಿನ ಗಾಡಿಗಳು ಟ್ರಾಕ್ಟರ್ ಗಳು ಗ್ರಾಮದ ಜಾತ್ರೆಯಲ್ಲಿ ಸಾವಿರಕ್ಕಿಂತ ಹೆಚ್ಚು ವಾಹನಗಳು ಪಾಲ್ಗೊಳ್ಳುತ್ತಾವೆ. ಗ್ರಾಮದ ಮುಖಂಡರು ಅಧಿಕರಿಗಳು, ನೌಕರರು , ರೈತರು ಮಹಿಳೆಯರು ಯುವಕರು ಉತ್ಸಾಹದಿಂದ ಪಾಲ್ಗೊಂಡು ದೇವಿಯ ಜೊತೆಗೆ ಹೆಜ್ಜೆ ಹಾಕುತ್ತಾರೆ ದಾರಿ ಉದ್ದಕ್ಕೂ ಭಕ್ತರು ಅನ್ನ ಪ್ರಸಾದ್ ಉಪಹಾರ ಚಾಹಾ ಚೋಡಾ ವ್ಯವಸ್ಥೆ ಮಾಡಿರುತ್ತಾರೆ ಸೋಮಾವಾರ ಬಾಡಗಿ ಗ್ರಾಮದಿಂದ ಬೆಳಗ್ಗೆ ತೆರಳಿವುದು ಝಂಜರವಾಡ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಮುಂಜಾನೆ 10 ಗಂಟೆಗೆ ದೇವಿಯ ನದಿ ಸ್ಥಾನ ಜರುಗುವುದು ನಂತರ ಅನ್ನಪ್ರಸಾಧ ಸುಪ್ರಸಿದ್ಧ ಭಜನಾ ಪದಗಳು ಜರುಗಲಿವೆ .

ಮಂಗಳವಾರ ಮುಂಜಾನೆ 10 ಗಂಟೆಗೆ ಅಲ್ಲಿಂದ ಕಕಮರಿಗೆ ಕಡೆಗೆ ಪಲ್ಲಕ್ಕಿ ಉತ್ಸವ ಸಾಗುವುದು ಎಂದು ಶ್ರೀ ಅಮ್ಮಾಜೇಶ್ವರಿ ದೇವಿ ಟ್ರಸ್ಟ್ ಕಮಿಟಿ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿ: ಆಕಾಶ ಮಾದರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ