ಬೆಳಗಾವಿ: ಜಿಲ್ಲೆ ಚಿಕ್ಕೋಡಿ ತಾಲೂಕಿನ, ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ , ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹1.30 ಲಕ್ಷ ಮೌಲ್ಯದ 5 ಕಳುವಾದ ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಸ್ವಪ್ನಿಲ್ ಅನೀಲ ಶಾರಬಿದ್ರೆ ಹಾಗೂ ರೋಹಿತ ಬಾಬಾಸಾಬ ದಾನವಾಡೆ ಎಂದು ಗುರುತಿಸಲಾಗಿದೆ.
ಇಬ್ಬರೂ ಖಡಕಲಾಟ ಗ್ರಾಮದ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಖಡಕಲಾಟ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ಅವರ ವಶದಲ್ಲಿದ್ದ ಐದು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಕೆ. ರಾಮರಾಜನ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ, ಶ್ರೀ ಆರ್. ಬಿ. ಬಸರಗಿ, ಚಿಕ್ಕೋಡಿ ಡಿಎಸ್ಪಿ , ಶ್ರೀ ಗೋಪಾಲಕೃಷ್ಣ ಗೌಡ, ನಿಪ್ಪಾಣಿ ವೃತ್ತದ ಸಿಪಿಐ ಶ್ರೀ ಬಿ. ಎಸ್. ತಳವಾರ ಅವರ ನೇತೃತ್ವದಲ್ಲಿ ನಡೆಯಿತು.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಶ್ರೀಮತಿ ಕೃಷ್ಣವೇಣಿ ಸಿ. ಗುರ್ಲಹೊಸೂರ ಹಾಗೂ ಖಡಕಲಾಟ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿಯಾದ ಮಂಜುನಾಥ ದಿಂಡಿಗಟ್ಟಿ, ರವಿ ಕುಂಬಾರ, ಎಸ್. ಸಿ. ಅಂಬರಶೆಟ್ಟಿ, ಕೆ. ಎಂ. ಬಳೋಲಟ್ಟಿ, ಆರ್. ಎನ್. ಮುರನಾಳೆ, ಯು. ಎಸ್. ಭಾಗಿ, ತನಿಖಾ ಸಹಾಯಕರಾದ ಎಸ್. ಎಲ್. ಬಾಡಕರ , ಆರ್. ಎಚ್. ಗಸ್ತಿ, , ಎ. ಎನ್. ಚೌಗಲಾ, ಡಿ. ಎಂ. ಹಿರೇಮಠ ಹಾಗೂ ಬೆಳಗಾವಿ ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಮತ್ತು ಸಚೀನ್ ಪಾಟೀಲ ಅವರು ಪ್ರಮುಖ ಪಾತ್ರವಹಿಸಿದ್ದರು.
ಪ್ರಕರಣವನ್ನು ಶೀಘ್ರದಲ್ಲೇ ಬಂಧಿಸಿ ಕಳುವಾದ ವಾಹನಗಳನ್ನು ಪತ್ತೆಹಚ್ಚಿದ ಖಡಕಲಾಟ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಕೆ. ರಾಮರಾಜನ್ (ಐಪಿಎಸ್) ಪ್ರಶಂಸಿಸಿದ್ದು, ಸಾರ್ವಜನಿಕರೂ ಪೊಲೀಸರ ಕಾರ್ಯಕ್ಷಮತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


