LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಪ್ರತಿಯೊಂದು ಕೆಲಸ ಮಾಡಲು ಪೋಲಿಸರಿಗೆ ಸಾರ್ವಜನಿಕರ ಸಹಕಾರಬೇಕು:SP ಕೆ .ರಾಮರಾಜನ್

Advertisement
ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಗೋಕಾಕ ಉಪ ವಿಭಾಗದಲ್ಲಿ ಸುಮಾರು 5 ವರ್ಷಗಳ ಹಿಂದಿನಿಂದ ಕಳೆದುಹೋದ ಮೊಬೈಲಗಳನ್ನು,ಕಳ್ಳತನವಾಗಿದ್ದ ಪಂಪಸೇಟ್ ಮತ್ತು ಆಭರಣಗಳನ್ನು ಪತ್ತೆ ಹಚ್ಚಿ ಬೆಳಗಾವಿ ಎಸ್, ಪಿ, ಕೆ.ರಾಮರಾಜನ್ ಇವರು ವಾರಸುದಾರರಿಗೆ ಮರಳಿ ಹಸ್ತಾಂತರಿಸಿದರು.

ನಂತರ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಎಸ್, ಪಿ ಕೆ ರಾಮರಾಜನ್ ಇವರು ಪ್ರತಿಯೊಂದು ಕೆಲಸಗಳನ್ನು ಪೋಲಿಸ್ ಇಲಾಖೆಯವರು ಮಾಡಬೇಕಾದರೆ ಅದಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಬೇಕೆಂದು ಮಾದ್ಯಮದ ಮೂಲಕ ಸಾರ್ವಜನಿಕರಿಗೆ ಹೇಳಿದರು.

ಇನ್ನು KSP ಆ್ಯಪನಲ್ಲಿ ಉದ್ದೇಶ ಪೂರ್ವಕವಾಗಿ ಪೋಲಿಸ್ ಸಿಬ್ಬಂದಿಗಳ ಮೇಲೆ ದುರುದ್ದೇಶದಿಂದ ಕಂಪ್ಲೇಟ್ ಮಾಡ್ತಾಯಿದ್ದಾರೆ ಎಂಬ ಪ್ರಶ್ನೆಗೆ ಎಸ್,ಪಿ ಕೆ ರಾಮರಾಜನ್ ಮಾತನಾಡಿ ಕೆಲವರು ತಮ್ಮ ಅಕ್ರಮ ಚಟುವಟಿಕೆಗೆ ಪೋಲಿಸ್ ಸಿಬ್ಬಂದಿಗಳು ಕಡಿವಾಣ ಹಾಕಿರುತ್ತಾರೆ, ಅದೆ ಒಂದು ಕಾರಣಕ್ಕಾಗಿ ದುರುದ್ದೇಶದಿಂದ ಪೊಲಿಸ್ ಸಿಬ್ಬಂದಿಗಳ ಮೇಲೆ KSP ಆಪನಲ್ಲಿ ಕಂಪ್ಲೀಟ ಮಾಡ್ತಾಯಿದ್ದಾರೆ, ನಾವು ಅದರ ಸತ್ಯಾಸತ್ಯಥೆ ತಿಳಿದ ಮೇಲೆ ಅಧಿಕಾರಿಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದರು.

ಇನ್ಮುಂದೆ ಸಾರ್ವಜನಿಕರು ಮೊಬೈಲ್ ,ತಾವು ದರಿಸುವ ಸರಗಳು, ಮಾಂಗಲ್ಯ,ಕಳ್ಳತನ ಆದಲ್ಲಿ ಯಾವುದೆ ರೀತಿಯ ಭಯ ಪಡದೆ ಸ್ಥಳಿಯ ಪೋಲಿಸ್ ಠಾಣೆಗೆ ತೆರಳಿ ಪಿರ್ಯಾದಿ ನಿಡಿದರೆ, ಪೋಲಿಸ್ ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆಂದರು.



ಅದರ ಜೊತೆಯಲ್ಲಿ ರಾಯಬಾಗ ಮತ್ತು ಕಾಗವಾಡ ತಾಲೂಕಿನ ರಾಜಾರೋಷವಾಗಿ ನಡೆಯುತ್ತಿರುವ ಮಟಕಾ ದಂದೆ, ಅಕ್ರಮ ಅಕ್ಕಿ ಸಾಗಾಟ ಮತ್ತು ವೈನನಲ್ಲಿ ಸಾರಾಯಿ ಮಾರಾಟದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅದರ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ತಕ್ಷಣ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅದಕ್ಕೆ ಮಾದ್ಯಮ ಸಹಕಾರ ಬೇಕು ಎಂದರು.

ಇದೆ ಸಂದರ್ಭದಲ್ಲಿ ಕೆ,ರಾಮರಾಜನ್ ಇವರು ಗೋಕಾಕದಲ್ಲಿ ಮಿಟರ ಬಡ್ಡಿ ದಂದೆ ನಡೆಯುತ್ತಿರುವ ಬಗ್ಗೆ ಹಲವಾರು ಪಿರ್ಯಾದಿಗಳು ಬಂದಿವೆ, ಬಡ್ಡಿಯ ನೇಪದಲ್ಲಿ ಅವರು ನೊಂದಣಿ ಮಾಡಿಸಿಕೊಂಡ ನಿಮ್ಮ ಅಸ್ತಿಯ ನೊಂದಣಿಯನ್ನು ರದ್ದು ಮಾಡಿಸುತ್ತೇವೆ ಅದಕ್ಕಾಗಿ ನೀವು ನೇರವಾಗಿ ನಮ್ಮ ಹತ್ತಿರ ಬಂದು ಕಂಪ್ಲೇಟ ಮಾಡಲು ತಿಳಿಸಿದರು.

ಇನ್ಮುಂದೆ ಯಾರಾದರೂ ಆರ್,ಬಿ, ಐ ಗೈಡಲೈನ್ಸ್ ನಿಯಮದಂತೆ ಮತ್ತು ಲೈಸನ್ಸ್ ಹೊಂದಿದವರು ನಿಯಮ ಮೀರಿ ಬಡ್ಡಿ ವಸೂಲಿ ಮಾಡಿದರೆ ಅಂತವರ ವಿರುದ್ದ ಹಳೆ ಕಾನೂನು ಮತ್ತು ಹೊಸ ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆಂದು ಖಡಕ್ಕಾಗಿ ಹೇಳಿದರು.

ಇನ್ನು ರಾತ್ರಿ ಹಗಲು ಕಳೆದು ಹೊದ ಮೊಬೈಲ್,ಕಳ್ಳತನವಾದ ನೀರಿನ ಮೊಟರ ಮತ್ತು ಆಬರಣಗಳನ್ನು ಪತ್ತೆಹಚ್ವಿದ ಗೋಕಾಕ ಉಪ ವಿಬಾಗದ ಪೋಲಿಸರಿಗೆ ಶ್ಲಾಘನೀಯ ವ್ಯಕಪಡಿಸಿದರು,

ಈ ಸಂದರ್ಭದಲ್ಲಿ ಗೋಕಾಕ ಉಪ ವಿಬಾಗ ಡಿಎಸ್ಪಿ ರವಿ ನಾಯಕ, ಸಿಪಿಆಯ್, ಆರ್, ಸುರೇಶಬಾಬು, ಶ್ರೀಶೈಲ ಬ್ಯಾಕೂಡ, ಪಿಎಸೈಗಳಾದ ಕೆ ವಾಲಿಕಾರ, ಕುರಣ ಮೊಹಿತೆ, ಯಮನಪ್ಪಾ ಮಾಂಗ ,ಆನಂದ ,ನೀಖಿಲ ಕಾಂಬಳೆ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ:ಮನೋಹರ ಮೇಗೇರಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ