Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ಮೃತ್ಯು ಆಗಮಿಸುವ ಮುನ್ನ ಬದುಕು ತಿಳಿದುಕೋ'

Advertisement
ಶಿರದವಾಡ ಪಂಚಕಲ್ಯಾಣ ಪೂಜಾ ಮಹೋತ್ಸವದಲ್ಲಿ ಪರಮಪೂಜ್ಯ ವಿದ್ಯಾಸಾಗರ ಮುನಿಗಳಿಂದ ಮನುಕುಲಕ್ಕೆ ಕಿವಿಮಾತು

ರಾಜ್ಯಾಭಿಷೇಕ ಶಾಸ್ತ್ರ ಮೆರವಣಿಗೆ ಕಾರ್ಯಕ್ರಮ

ನಿಪ್ಪಾಣಿ: ಮಾನವನ ಬದುಕು ಅತ್ಯಂತ ಮೌಲ್ಯಯುತ ಎಲ್ಲ ಜೀವ ರಾಶಿಗಳಲ್ಲಿ ಅರಿವು ಎಂಬ ವಿಶೇಷ ಜ್ಞಾನವನ್ನು ಜಿನೇಶ್ವರ ಮಾನವನಿಗೆ ದಯಪಾಲಿಸಿದ್ದಾನೆ. ಆದ್ದರಿಂದ ಮೃತ್ಯು ಆಗಮಿಸುವ ಮುನ್ನ ಬದುಕಿನ ತಿರುಳು ಅರಿತುಕೊಳ್ಳಿ. ಶಾಂತಿ,ತ್ಯಾಗ, ಅಹಿಂಸೆ, ಸದ್ವಿಚಾರ, ಆಚಾರ, ಶರಣಾಗತಿ, ಸತ್ಚಾರಿತ್ರ್ಯ ಶರಣಾಗತಿ,ಪರೋಪಕಾರ, ಅಳವಡಿಸಿಕೊಂಡು ನೈಜ ಬದುಕಿನ ಅರ್ಥ ತಿಳಿದುಕೊಳ್ಳಿ ಎಂದು ಪರಮಪೂಜ್ಯ ವಿದ್ಯಾಸಾಗರಜೀ ಮುನಿಗಳು ಸಮಸ್ತ ಶ್ರವಕ ಶ್ರಾವಕಿಯರಿಗೆ ಕಿವಿಮಾತು ಹೇಳಿದರು.

 

ನಿಪ್ಪಾಣಿ ತಾಲೂಕಿನ ಶಿರದವಾಡ ಗ್ರಾಮದಲ್ಲಿ ಜರಗುತ್ತಿರುವ ಪಂಚಕಲ್ಯಾಣ ಪೂಜಾ ಮಹೋತ್ಸವದ ನಾಲ್ಕನೇ ದಿನವಾದ ರಾಜ್ಯಾಭಿಷೇಕ ದಿನದಂದು ತಮ್ಮ ಪ್ರವಚನದಲ್ಲಿ ತಿಳಿಸಿದರು.

ಬೆಳಿಗ್ಗೆ ಶಾಸಕಿ ಶಶಿಕಲಾ ಜೊಲ್ಲೆ ಆಗಮಿಸಿ ತ್ಯಾಗಿ ಮುನಿಗಳಿಂದ ಆಶೀರ್ವಾದ ಪಡೆದರು. ಮಧ್ಯಾನ್ಹ ಯುವ ನಾಯಕ ಉತ್ತಮ ಪಾಟೀಲ ವೀರಸೇವಾ ದಳ ಅಧ್ಯಕ್ಷ ಬಾಳಾ ಸಾಹೇಬ್ ಪಾಟೀಲ ತಮ್ಮ ಸಮರ್ಥಕರೊಂದಿಗೆ ಆಗಮಿಸಿ ಶ್ರೀಗಳ ಆಶೀರ್ವಚನ ಪಡೆದು ಅವರ ಪ್ರವಚನ ಆಲಿಸಿದರು. ಈ ಸಂದರ್ಭದಲ್ಲಿ ಉತ್ತಮ ಪಾಟೀಲ,ಹಾಗೂ ಬಂಟಿ ಪಾಟೀಲ್ ಮಾತನಾಡಿದರು.



ರಾಜಾಭಿಷೇಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ನಿತ್ಯವಿಧಿ,ಪಂಚಾಮೃತ ಅಭಿಷೇಕ, ಶಾಂತಿಧಾರಾ,ಸೇರಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ 56 ದೇಶಗಳ ರಾಜ್ಯದ ರಾಜ ರಿಂದ ಭಕ್ತಿ ಸಮರ್ಪಣೆ, ಸೌಧರ್ಮ ಇಂದ್ರ, ಇಂದ್ರಾಯನಿಯರಿಂದ ವಿವಿಧ ಪದಸಿದ್ಧ ಧರ್ಮನುರಾಗಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ರಾಜ್ಯಾಭಿಷೇಕ ದಿನವಾದ ಗುರುವಾರ ಬೆಳಗಾವಿ ಕೊಲ್ಲಾಪುರ್ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಶ್ರಾವಕ, ಶ್ರಾವಕೀಯರು ಉಪಸ್ಥಿತರಿದ್ದರು.

ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ