Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಥಣಿಯಲ್ಲಿ ಎಸ್ಸಿ, ಎಸ್ಟಿ ವಕೀಲರ ಹಿತ ರಕ್ಷಣೆಗಾಗಿ ವಕೀಲರ ಸಂಘ

Advertisement
------------------------------------------------ಉದ್ಘಾಟನೆ: ಪದಾಧಿಕಾರಿಗಳ ನೇಮಕ
ಜಾತಿ ಮತ್ತು ಪರಿಶಿಷ್ಟ ಪಂಗಡ ವಕೀಲರ ಸಂಘದ ರಾಜ್ಯಾಧ್ಯಕ್ಷರಾದ ಎಂ. ಮುನಿಯಪ್ಪ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಸೆ. 27ರಂದು ವಕೀಲರಾದ ಮಿತೇಶ ಪಟ್ಟಣ ಅವರ ಕಚೇರಿಯಲ್ಲಿ ಕರ್ನಾಟಕ ರಾಜ್ಯದ ಎಸ್‌ಸಿ, ಎಸ್‌ಟಿ ವಕೀಲರ ಸಂಘದ ಅಥಣಿ ಮತ್ತು ಕಾಗವಾಡ ತಾಲೂಕು ಘಟಕವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.



 

ಸಂಘಟನೆಯನ್ನು ಬಲಪಡಿಸಬೇಕು. ಈ ಸಂಘಟನೆಯು ಸಂಪೂರ್ಣ ರಾಜ್ಯದಲ್ಲಿ ಸ್ಥಾಪನೆಯಾದಲ್ಲಿ ಎಸ್‌ಸಿ, ಎಸ್‌ಟಿ ವಕೀಲರ ಹಿತ ಕಾಪಾಡಲು ಖಂಡಿತವಾಗಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯದ ಎಸ್‌ಸಿ, ಎಸ್‌ಟಿ ವಕೀಲರ ಸಂಘದ ಅಥಣಿ ಮತ್ತು ಕಾಗವಾಡ ತಾಲೂಕು ಘಟಕದ ನೂತನ ಅಧ್ಯಕ್ಷರಾದ ಎಸ್‌.ಎಸ್. ವಾಘಮೋರೆ ಮಾತನಾಡಿ, ನಿಜಕ್ಕೂ ನಮ್ಮ ಸಮಾಜಗಳ ವಕೀಲ ಬಾಂಧವರಿಗೆ ಇಂತಹ ಒಂದು ದೊಡ್ಡ ಶಕ್ತಿಯಾಗಿರುವ ರಾಜ್ಯ ಸಂಘಟನೆಯು ಅವಶ್ಯವಿತ್ತು.



ಇದರಿಂದ ರಾಜ್ಯದ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಕೀಲರ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಎಸ್‌., ಗೋಪಾಲ ಆರ್.ಜಿ., ಆಕಾಶ ಎ., ರಾಜ್ಯದ ಎಸ್‌ಸಿ, ಎಸ್‌ಟಿ ವಕೀಲರ ಸಂಘದ ಅಥಣಿ ಮತ್ತು ಕಾಗವಾಡ ತಾಲೂಕು ಘಟಕದ ಉಪಾಧ್ಯಕ್ಷರಾದ ಎಸ್.ಎಸ್. ನಿಡೋಣಿ, ಬಿ.ಎಸ್‌. ಕಾಂಬಳೆ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಸ್‌. ವಾಘಮಾರೆ, ಮೋಹನ ದೊಡಮನಿ, ಜಂಟಿ ಕಾರ್ಯದರ್ಶಿಗಳಾದ ಶಶಿಕಾಂತ ಬಾಡಗಿ, ರವಿ ಕಾಂಬಳೆ, ಖಜಾಂಚಿಗಳಾದ ಮಿತೇಶ ಪಟ್ಟಣ, ಮಹಿಳಾ ಪ್ರತಿನಿಧಿ ದೀಪಿಕಾ ಕಾಂಬಳೆ ಅವರಿಗೆ ನೇಮಕ ಪ್ರತಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ವಕೀಲರಾದ ರಾಮು ಪೂಜಾರಿ,ಗೀತಾ ಕಾಂಬಳೆ ಸೇರಿದಂತೆ ನೂರಾರು ವಕೀಲರು ಉಪಸ್ಥಿತರಿದ್ದರು.

ವಕೀಲರಾದ ಬಾಹುಸಾಬ ಕಾಂಬಳೆ ಸ್ವಾಗತಿಸಿದರು. ಶಶಿಕಾಂತ ಬಾಡಗಿ ನಿರೂಪಿಸಿದರು. ಮಿತೇಶ ಪಟ್ಟಣ ವಂದಿಸಿದರು. ದಯಾನಂದ ವಾಘಮೋರೆ ಕ್ರಾಂತಿ ಗೀತೆ ಹಾಡಿದರು.
ರಾಜ್ಯದ ಎಸ್‌ಸಿ, ಎಸ್‌ಟಿ ವಕೀಲರ ಸಂಘದ ಅಥಣಿ ಮತ್ತು ಕಾಗವಾಡ ತಾಲೂಕು ಘಟಕದ ನೂತನ ಅಧ್ಯಕ್ಷರಾದ ಎಸ್‌.ಎಸ್. ವಾಘಮೋರೆ ಮಾತನಾಡಿ, ನಿಜಕ್ಕೂ ನಮ್ಮ ಸಮಾಜಗಳ ವಕೀಲ ಬಾಂಧವರಿಗೆ ಇಂತಹ ಒಂದು ದೊಡ್ಡ ಶಕ್ತಿಯಾಗಿರುವ ರಾಜ್ಯ ಸಂಘಟನೆಯು ಅವಶ್ಯವಿತ್ತು.

ಇದರಿಂದ ರಾಜ್ಯದ ಎಸ್‌ಸಿ, ಎಸ್‌ಟಿ ವಕೀಲರೆಲ್ಲರಿಗೂ ತಮ್ಮ ಸಮಸ್ಯೆಗಳ ನಿವಾರಣೆಗೆ ಹಾಗೂ ಬೇಡಿಕೆಗಳ ಈಡೇರಿಕೆಗೆ, ನಮ್ಮ ಹಕ್ಕುಗಳನ್ನು ಪಡೆಯುಲು ನಿಶ್ಚಿತವಾಗಿಯೂ ಸಾಧ್ಯವಾಗಲಿದೆ. ಎಸ್‌ಸಿ, ಎಸ್‌ಟಿ ವಕೀಲರ ಹಿತಾಸಕ್ತಿ ಮಾಡುವ ನಿಜವಾದ ಕಳಕಳಿಯಿಂದ ಸಂಘಟನೆಯನ್ನು ರಾಜ್ಯಾದ್ಯಂತ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಸಮಾಜದ ಎಲ್ಲ ಹಿರಿಯ ವಕೀಲರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿನ ಎಲ್ಲ ವಕೀಲರ ಹಿತರಕ್ಷಣೆಯ ಜವಾಬ್ದಾರಿಯೊಂದಿಗೆ ನನಗೆ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿದ್ದು, ಖಂಡಿತವಾಗಿಯೂ ನಾನು ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು.ರಾಜ್ಯದ ಎಲ್ಲ ವಕೀಲರ ಸಂಘಗಳಲ್ಲಿ ಎಸ್.ಸಿ., ಎಸ್.ಟಿ. ವಕೀಲರಿಗೆ ಮೀಸಲಾತಿ ಕಲ್ಪಿಸಬೇಕೆಂದು ಸರ್ವೋಚ್ಚ ನ್ಯಾಯಾಲದಲ್ಲಿ ರಿಟ್ ಪ್ರಿಟಿಷನ್ ದಾಖಲಿಸಲಾಗಿದೆ. ರಾಜ್ಯದಲ್ಲಿ ವಿವಿಧ ಘಟನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ, ಅನ್ಯಾಯ ಮಾಡುವಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.

ಇದರಿಂದಾಗಿ ಹಲವಾರು ವಕೀಲರು ಭಯಭೀತಿಯಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡುವಂತಾಗಿದೆ. ಇಂತಹ ಭಯ ಭೀತಿ ವಾತಾವರಣ ನಿವಾರಣೆಗೊಂಡು, ವಕೀಲರು ಧೈರ್ಯದಿಂದ ಮುಕ್ತವಾಗಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಬೇಕು. ದೇಶಕ್ಕೆ ಪವಿತ್ರ ಸಂವಿಧಾನ ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕ‌ರ್ ಅವರೇ ನಮಗೆ ಆದರ್ಶ ನಾಯಕರಾಗಿದ್ದಾರೆ.

ಅವರ ಆಶಯದಂತೆ ನಾವು ನಡೆಯುತ್ತಿದ್ದೇವೆ. ಅನ್ಯಾಯಗಳ ವಿರುದ್ಧ ಪ್ರತಿಭಟಿಸಿ ನ್ಯಾಯ ಪಡೆಯುವುದು ನಮ್ಮ ಹಕ್ಕು. ಇದನ್ನು ನಾವು ಯಾರಿಂದಲೂ ಕಲಿಯಬೇಕಿಲ್ಲ. ಮತ್ತು ನಾವು ಯಾರ ವಿರುದ್ಧವೂ ಇಲ್ಲ. ನಮ್ಮ ಸಮಾಜಗಳ ವಕೀಲರ ಒಳಿತಿಗಾಗಿ, ಅವರ ಶ್ರೇಯೋಭಿವೃದ್ಧಿಗಾಗಿ ನಾವು ಸಂಘಟಿತರಾಗುತ್ತಿದೇವೆ. ಇದಕ್ಕೆ ರಾಜ್ಯದ ಎಲ್ಲ ಎಸ್‌ಸಿ, ಎಸ್‌ಟಿ ವಕೀಲರು ಸಹಕಾರ ನೀಡಿ ಸಂಘಟನೆಯನ್ನು ಬಲಪಡಿಸಬೇಕು. ಈ ಸಂಘಟನೆಯು ಸಂಪೂರ್ಣ ರಾಜ್ಯದಲ್ಲಿ ಸ್ಥಾಪನೆಯಾದಲ್ಲಿ ಎಸ್‌ಸಿ, ಎಸ್‌ಟಿ ವಕೀಲರ ಹಿತ ಕಾಪಾಡಲು ಖಂಡಿತವಾಗಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಸೆ. 27ರಂದು ವಕೀಲರಾದ ಮಿತೇಶ ಪಟ್ಟಣ ಅವರ ಕಚೇರಿಯಲ್ಲಿ ಕರ್ನಾಟಕ ರಾಜ್ಯದ ಎಸ್‌ಸಿ, ಎಸ್‌ಟಿ ವಕೀಲರ ಸಂಘದ ಅಥಣಿ ಮತ್ತು ಕಾಗವಾಡ ತಾಲೂಕು ಘಟಕವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರ ಹಿತರಕ್ಷಣೆಗಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಕೀಲರ ಸಂಘವು ಸ್ಥಾಪನೆಯಾಗಿದ್ದು, ಎಸ್‌ಸಿ, ಎಸ್‌ಟಿ, ನ್ಯಾಯವಾದಿಗಳ ಹಿತ ರಕ್ಷಣೆ ಮಾಡುವುದು ಈ ಸಂಘಟನೆಯ ಉದ್ದೇಶವಾಗಿದೆ.

ದೌರ್ಜನ್ಯ, ಅನ್ಯಾಯಕ್ಕೊಳಗಾದ ವಕೀಲರಿಗೆ ನ್ಯಾಯ ದೊರಕಿಸಲು ಹೋರಾಟ, ತಾರತಮ್ಯ ನಿವಾರಣೆಗಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಈಗ ಸುಮಾರು 3600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ರಾಜ್ಯಾದ್ಯಂತ ಸಂಘಟನೆಯನ್ನು ಗಟ್ಟಿಗೊಳಿಸುತ್ತಿದ್ದು, ಈಗ ಕರ್ನಾಟಕ ರಾಜ್ಯದ ಎಸ್‌ಸಿ, ಎಸ್‌ಟಿ ವಕೀಲರ ಸಂಘದ ಅಥಣಿ ಮತ್ತು ಕಾಗವಾಡ ತಾಲೂಕು ಘಟಕವನ್ನು ರಚನೆ ಮಾಡಿ ನೂತನ ಪದಾಧಿಕಾರಿಗಳಿಗೆ ನೇಮಕ ಪ್ರತಿಗಳನ್ನು ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಕೀಲರ ಸಂಘದ ರಾಜ್ಯಾಧ್ಯಕ್ಷರಾದ ಎಂ. ಮುನಿಯಪ್ಪ ಹೇಳಿದರು

ವರದಿ: ಅಜಯ ಕಾಂಬಳೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ