Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಸೆಕ್ಸ್ ಇರುವುದು ಸಂತೋಷಕ್ಕಾಗಿ ಎಂದು ಭಾರತದಲ್ಲಿರುವ ಬಹುತೇಕ ಮಹಿಳೆಯರಿಗೆ ತಿಳಿದೇ ಇಲ್ಲ’

Advertisement
ನವದೆಹಲಿನೇರ ಮಾತುಗಳಿಂದಲೇ ಸುದ್ದಿಯಾಗುವ ಹಿರಿಯ ನಟಿ ನೀನಾ ಗುಪ್ತಾ, ಸೆಕ್ಸ್ ಬಗ್ಗೆ ಮಾತನಾಡಿ ಈಗ ಸುದ್ದಿಯಲ್ಲಿದ್ದಾರೆ.

ಲಿಲ್ಲಿಂಗ್ ಸಿಂಗ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಹಿರಿಯ ನಟಿ ನೀನಾ ಗುಪ್ತಾ, ಭಾರತದ ಮಹಿಳೆಯರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿರುವ ಬಹುತೇಕ ಮಹಿಳೆಯರಿಗೆ ಸೆಕ್ಸ್ ಎಂಬುದು ತಮ್ಮ ಸಂತೋಷಕ್ಕಾಗಿ ಇರುವುದೆಂದು ತಿಳಿದೇ ಇಲ್ಲ. ಸೆಕ್ಸ್ ಇರುವುದು ಪುರುಷರ ಸಂತೋಷಕ್ಕಾಗಿ ಹಾಗೂ ಮಕ್ಕಳನ್ನು ಹೆರುವುದಕ್ಕಾಗಿ ಎಂದು ಭಾವಿಸಿರುವುದಾಗಿ ನೀನಾ ಗುಪ್ತಾ ಹೇಳಿದ್ದಾರೆ.



"ಮಹಿಳೆಯರು ಮತ್ತು ಲೈಂಗಿಕತೆಯ ಬಗ್ಗೆ ನನಗೆ ತುಂಬಾ ದುಃಖವಾಗುತ್ತದೆ. ನಾನು ಭಾರತದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು 99 ಅಥವಾ ಬಹುಶಃ 95% ಭಾರತೀಯ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದೇನೆ. ಅವರಿಗೆ ಲೈಂಗಿಕತೆಯು ಆನಂದಕ್ಕಾಗಿ ಎಂದು ತಿಳಿದಿಲ್ಲ. ಅವರು ಇದು ಪುರುಷನನ್ನು ಮೆಚ್ಚಿಸಲು ಮತ್ತು ಮಕ್ಕಳನ್ನು ಹೊಂದಲಷ್ಟೇ ಇರುವುದು ಎಂದು ಭಾವಿಸುತ್ತಾರೆ.

ಲಿಲ್ಲಿ ಸಿಂಗ್ 'ಸೆಕ್ಸ್' ಎಂಬ ಪದವನ್ನು ಪಿಸುಗುಟ್ಟದೇ ಹೇಳಿದ್ದಕ್ಕಾಗಿ, ನಾನು ಮೊದಲು ಮನೆಯಲ್ಲಿ ಸೆಕ್ಸ್ ಎಂಬ ಶಬ್ದ ಬಳಕೆ ಮಾಡುವುದಕ್ಕೂ ಹಿಂಜರಿಯುತ್ತಿದ್ದೆ. ಆದರೆ ಈಗ ಅದನ್ನು ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಇತರ ನಟರು ತಮ್ಮ ಮೈಕ್‌ಗಳನ್ನು ತಮ್ಮ ಬಟ್ಟೆಯ ಒಳಗೆ ಇರಿಸಲು ಗ್ರೀನ್ ರೂಮ್‌ಗಳನ್ನು ಬಳಸುತ್ತಾರೆ, ಆದರೆ ತಾವು ಚಿತ್ರೀಕರಣದ ಸ್ಥಳದಲ್ಲಿ ಎಲ್ಲರೂ ಸುತ್ತಲೂ ಇರುವಾಗಲೇ ಮೈಕ್‌ ಹಾಕಿಕೊಂಡರು, ಯಾರು ನೋಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನೀನಾ ಗುಪ್ತಾ ಹೇಳಿದ್ದಾರೆ.

"ಬಾಂಬೆಯಲ್ಲಿ ಉತ್ತಮವಾದ ವಿಷಯವೆಂದರೆ ತಾಂತ್ರಿಕ ಸಿಬ್ಬಂದಿ, ಲೈಟ್ ಮ್ಯಾನ್, ಸೌಂಡ್ ಜನರು, ಅವರು ನಿಮ್ಮನ್ನು ನೋಡುವುದಿಲ್ಲ, ಎಲ್ಲರೂ ಹೀಗೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮತ್ತು ಈಗ ಹಲವು ವರ್ಷಗಳಿಂದ, ನನಗೆ ಗ್ರೀನ್ ರೂಮ್ ಗೆ ಹೋಗಬೇಕೆಂದು ಅನ್ನಿಸುವುದಿಲ್ಲ ಎಂದು ನಟಿ ಹೇಳಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ