ಚಾಮರಾಜನಗರ: ಮಸಣಪುರ ಗ್ರಾಮಕ್ಕೆ ಭೇಟಿಕೊಟ್ಟ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾದ ಎನ್ ಮಹೇಶ್ ತಪ್ಪು ಮಾಡಿದ ಚಂದ್ರು ಎಂಬುವವನಿಗೆ ದೇಶ ದ್ರೋಹದ ಕೇಸ್ ಹಾಕಿ ಮಸಣಪುರ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ನೆಡೆದಿದ್ದು
ಆ ಘಟನ ಸ್ಥಳಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎನ್ ಮಹೇಶ್ ರವರು ಆಗಮಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ. ಯಜಮಾನರು ಹಾಗೂ ಯುವಕರ ಜೋತೆ ಘಟನೆಯಬಗ್ಗೆ ಚರ್ಚಿಸಿದರು.
ನಂತರ ಮಾಧ್ಯಮದ ಜೋತೆ ಮಾತನಾಡಿದ ಅವರು ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುವ ಚಂದನ್ ಎಂಬುವ ಯುವಕನಿಗೆ ರಾಷ್ಟ್ರದ್ರೋಹದ ಕೇಸ್ ಹಾಕಬೇಕು ರಾಷ್ಟ್ರನಾಯಕರಾದ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದವರಿಗೆಲ್ಲ ರಾಷ್ಟಧ್ವಜಕೆ ಅಪಮಾನ ಮಾಡಿದಾಗ ಯಾವ ಕೇಸ್ ಹಾಕುತ್ತಾರ ಅದೇತರ ಹಾಕಬೇಕು ದಲಿತರು ಹೆಚ್ಚು ಇರುವ ಈ ಕ್ಷೇತ್ರದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ನೋವಿನ ಸಂಗತಿ.ಇವಾಗಾಗಲೇ ಸಿಕ್ಕಿಬಿದ್ದಿರುವ ವ್ಯಕ್ತಿಯನ್ನು ಬುದ್ಧಿಮಾಂದ್ಯತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
ಆ ಯುವಕ ಬುದ್ಧಿಮಾಂದ್ಯತೆ ವ್ಯಕ್ತಿಹಾಗಿದ್ದರೆ ಅವನಿಗೆ ಅಂಬೇಡ್ಕರ್ ಒಬ್ಬರ ಫೋಟೋಗೆ ಮಾತ್ರ ಯಾಕೆ ಇಂತಹ ಕೆಲಸ ಮಾಡಿದನೇ ಬೇರೆ ಸಮುದಾಯ ಬೋರ್ಡ್ ಗೆ ಅಪಮಾನ ಮಾಡದೆ ಹೂಡಿಕೊಂಡು ಹೋಗಿ ಅಂಬೇಡ್ಕರ್ ಫೋಟೋ ಇರುವಸ್ಥಳಕ್ಕೆ ಬಂದು ಕೃತ್ಯ ಮಾಡಿರುವುದಕ್ಕೆ ಕಾರಣ ಏನು ಅವನು ಸರಿಯಾಗಿ ಇದ್ದಾನೆ ಆ ಕಿಡಿಗೇಡಿ ಯುವಕನ ಹಿಂದುಗಡೆ ಯಾರ ಯಾರು ಇದ್ದಾರೆ ಅವರನ್ನು ಪೊಲೀಸ್ ಇಲಾಖೆ ತನಿಖೆ ನೆಡೆಸಬೇಕು ಎಂದು ತಿಳಿಸಿದರು.
ವರದಿ; ಸ್ವಾಮಿ ಬಳೇಪೇಟೆ


