ಈ ಕಾರ್ಯಕ್ರದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ಮಹಿಮೂದ್ ಸಾಬ್ ಎಲ್ಲಾ ಪೌಷ್ಟಿಕ ಆಹಾರ ಬಗ್ಗೆ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು. ಅದೇ ರೀತಿ ಅಂಗನವಾಡಿಯಲ್ಲಿ ಮಕ್ಕಳಿಗೆ ದಿನನಿತ್ಯ ಆಹಾರ ಕೊಡಬೇಕು, ಸರಕಾರದಿಂದ ಬರುವ ಎಲ್ಲಾ ಆಹಾರ ಸೌಲಭ್ಯಗಳು ಬಡವರಿಗೆ ಮುಟ್ಟಿಸಬೇಕು, ದಿನನಿತ್ಯ ಮೊಟ್ಟೆ ಮಕ್ಕಳಿಗೆ, ಮತ್ತು ಗರ್ಭಿಣಿ ಸ್ತ್ರೀಯರಿಗೆ ವಿತರಿಸಬೇಕು ಎಂದು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅನಿತಾ ಶಾಮಪ್ಪ, ಸರಕಾರಿ ಶಾಲೆಯ ಮುಖ್ಯ ಗುರುಗಳಾದ ತಮ್ಮಣ್ಣ ಮಡಿವಾಳ, ರುಕ್ಮದ್ದೀನ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಊರಿನ ಗರ್ಬಿಣಿ ಸ್ತ್ರೀಯರು ಹಾಗೂ ಮುಖಂಡರು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್

