ಮಾನ್ವಿ: ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿನ ಶ್ರೀ ಭ್ರಮರಾಂಭ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೋಮವಾರ ಅಂಗವಾಗಿ ಸಂಜೆ ನೂತನ ಪಲ್ಲಕ್ಕಿಯಲ್ಲಿ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ರಜತ ಕವಚ ಸೇರಿದಂತೆ ಶ್ರೀ ಭ್ರಮರಾಂಭ ಶ್ರೀಶೈಲಮಲ್ಲಿಕಾರ್ಜುನ ಸ್ವಾಮಿಯ ,ಉತ್ಸವ ಮೂರ್ತಿಗಳನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಛತ್ರಿ ಚಾಮರಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಗ್ರಾಮದ ಭಕ್ತರು ತಮ್ಮ ಮನೆ ಹತ್ತಿರ ಪಲ್ಲಕ್ಕಿ ಬರುತ್ತಿದ್ದಂತೆ ಮಡಿಯಿಂದ ತುಂಬಿದ ಕೊಡದ ನೀರನ್ನು ಹಾಕಿ ಪೂಜೆ ಸಲ್ಲಿಸಿದರು. ವಿವಿಧ ಜನಪದ ವಾದ್ಯಗಳೊಂದಿಗೆ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು . ಶ್ರೀ ಭ್ರಮರಾಂಭ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಅರ್ಚಕರು ಹಾಗೂ ಗ್ರಾಮದ ನೂರಾರು ಭಕ್ತರು ಭಾಗವಹಿಸಿದರು.
ವರದಿ :ಆಂಜನೇಯ ನಸಲಾಪುರ


