Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಪೊಲೀಸರು 

Advertisement
ಕಲಬುರಗಿ : ದುಡ್ಡಿಗಾಗಿ ರಾಷ್ಟ್ರದ ವಿವಿಧ ಪ್ರತಿಷ್ಠಿತ ವಿವಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಕಲಬುರಗಿಯ ಸೆನ್​​ ಪೊಲೀಸರು ಬೇಧಿಸಿದ್ದಾರೆ.

ಈ ಪ್ರಕರಣದ ಕಿಂಗ್​ ಪಿನ್​ ದೆಹಲಿ ಮೂಲದ​​​​​​ ರಾಜೀವ್​​​ ಸಿಂಗ್​ ಅರೋರಾ ಎಂಬುವವನ್ನು ದೆಹಲಿಯಲ್ಲಿ ಬಂಧಿಸಿ ಕಲಬುರಗಿಗೆ ಖಾಕಿ ಪಡೆ ಕರೆ ತಂದಿದ್ದು, ಇನ್ನಿತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಗರದ ಏಷಿಯನ್ ಮಾಲ್​ ನಲ್ಲಿ ಗ್ಲ್ಯಾಮ್​​​ ಚಾಯಿಸ್ ಹೆಸರಿನ ಬಟ್ಟೆ ಅಂಗಡಿಯಲ್ಲಿ ಎಲೆಜೆನ್ಸ್​​​​​​​​​​​ ಟೆಕ್ನಾಲಜಿ & ಪ್ಲೇಸ್​​​​​ಮೆಂಟ್​​ ​ ಬ್ಯೂರೋ ಎಂಬ ಹೆಸರಲ್ಲಿ ನಗರದ ತಾರ್​​​ಫೈಲ್​ ನಿವಾಸಿ ಆರೋಪಿ ಮೊಹ್ಮದ್​​​ ಖಾನ್​​​​​ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಸೆನ್​​ ಠಾಣೆಯ ಪೊಲೀಸರ ತಂಡ ಕಿನ್​​​ ಪಿನ್​​​ನನ್ನು ಬಂಧಿಸಿದೆ. 10ನೇ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ., ಬಿ.ಟೆಕ್​ ಇನ್ನಿತರೆ ಪದವಿಯ ನಕಲಿ ಅಂಕಪಟ್ಟಿಯನ್ನು ಮಾರಾಟ ಮಾಡುತ್ತಿದೆ ಎಂಬ ದೂರಿನಡಿ ತನಿಖೆ ಕೈಗೊಂಡಿದ್ದ ಸ್ಟೇಷನ್​ ಬಜಾರ್ ಪೊಲೀಸರ ವರದಿಯಂತೆ ಸೆನ್​​ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತನಿಂದ ಎರಡು ಲ್ಯಾಪ್​​​ ಟಾಪ್, 1 ಪ್ರಿಂಟರ್, 36 ಮೊಬೈಲ್​, 28 ವಿವಿಧ ವಿವಿಗಳ ಹೆಸರಿನ 122ಕ್ಕೂ ಹೆಚ್ಚು ನಕಲಿ ಸೀಲ್​​, ನಕಲಿ ಅಂಕಪಟ್ಟಿ ತಯಾರಿಸಲು ಇಟ್ಟಿದ್ದ 1,626 ಖಾಲಿ ಪೇಪರ್ಸ್​​, 87 ವಿವಿಧ ಬ್ಯಾಂಕ್​​ ಖಾತೆಗಳ ಪಾಸ್​​ಬುಕ್, ರೂ.1,20,000 ನಗದನ್ನು ಪೊಲೀಸರು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ