Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಪ್ತೋಡ್ ಮಾಜಿ ಶಾಸಕ ತೋಪುದುರಿತಿ ಪ್ರಕಾಶ್ ರೆಡ್ಡಿ ಪಾವಗಡ ಪಟ್ಟಣಕ್ಕೆ ಆಗಮನ

Advertisement
ಪಾವಗಡ: ಪಟ್ಟಣದಲ್ಲಿ ಇರುವ ನಿರಾಕ್ಷಣೆ ಮಂದಿರಕ್ಕೆ ಶನಿವಾರ ಮಧ್ಯಾಹ್ನ 2 ಗಂಟೆ ಸಮಯಕ್ಕೆ ಪಾವಗಡ ತಾಲೂಕಿನ ಗಡಿ ಭಾಗದ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆ ಪಕ್ಕದಲ್ಲಿರುವ ರಾಪ್ತೊಡ್ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ತೋಪುದುರಿತಿ ಪ್ರಕಾಶ್ ರೆಡ್ಡಿ ಆಗಮಿಸಿದರು. ಇದರಂತೆ ಪಾವಗಡ ತಾಲೂಕಿನಲ್ಲಿರುವ ಅವರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಂಡರು.

ಇದೇ ಸಂದರ್ಭದಲ್ಲಿ.ರಾಪ್ತೊಡ್ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ತೋಪುದುರಿತಿ ಪ್ರಕಾಶ್ ರೆಡ್ಡಿ. ಮಾತನಾಡಿ. ಪಾವಗಡ ತಾಲೂಕಿನಲ್ಲಿ ಇರುವ ನಮ್ಮ ಆತ್ಮೀಯರು ಹಾಗೂ ನನ್ನ ಬಂಧು ಮಿತ್ರರು ಮತ್ತು ನನ್ನ ಅಣ್ಣ ತಮ್ಮಂದಿರು ಸಂದರ್ಭದಲ್ಲಿ ಎಲ್ಲರಿಗೂ ನಮಸ್ಕಾರಗಳು ತಿಳಿಸುತ್ತಾ. ನಾನು ಪಾವಗಡ ತಾಲೂಕಿಗೆ ಬೇಟೆ ನೀಡಿರುವ ಸಂದರ್ಭ ಏನೆಂದರೆ. ಇದೇ ತಿಂಗಳು ನವಂಬರ್ ದಿನಾಂಕ 23/11/25 ಭಾನುವಾರ ರಂದು 10:30 ಗಂಟೆಗೆ ಸಮಯಕ್ಕೆ ಅನಂತಪುರ ಜಿಲ್ಲೆಯ ಪಕ್ಕದಲ್ಲಿರುವ ರಾಪ್ತೊಡ್ ವಿಧಾನಸಭಾ ಕ್ಷೇತ್ರದಲ್ಲಿ ಬರುವ NH-44 ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಬರುವ HPಪೆಟ್ರೋಲ್ ಬ್ಯಾಂಕ್ ಮುಂದೆ ನನ್ನ ಅಣ್ಣನ ಮಗಳುದ ಮೋಕ್ಷಿತ ವಿಷ್ಣುಪ್ರಿಯ ರೆಡ್ಡಿ ರವರದು ಮದುವೆ ಕಾರ್ಯಕ್ರಮ ಏರ್ಪಡಿಸಿದ್ದೇವೆ.

ಈ ಮದುವೆ ಕಾರ್ಯಕ್ರಮಕ್ಕೆ ನಮ್ಮ ನಾಯಕ ಆಂಧ್ರ ಪ್ರದೇಶ್ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರವರು ಬರುತ್ತಿದ್ದಾರೆ. ಅದಕ್ಕೆ ಪಾವಗಡ ತಾಲೂಕಿನ ಇರುವ ನನ್ನ ಆತ್ಮೀಯ ಬಂಧುಗಳು ನಾನು ಶಾಸಕ ಆಗು ಬೇಕೆಂದು ಪ್ರತಿಯೊಂದು ಎಲೆಕ್ಷನ್ ನಲ್ಲಿ ಪಾವಗಡ ನನ್ನ ಅಣ್ಣ ತಮ್ಮಂದಿರು ಮತ್ತು ನನ್ನ ಬಂಧ ಮಿತ್ರರು ಹಾಗೂ ನನ್ನ ಅಭಿಮಾನಿಗಳಿಂದ ಗೆಲ್ಲಬೇಕೆಂದು ಆರ್ಥಿಕವಾಗಿ ಹಣ ಸಹಾಯ ಮಾಡಿ ನನ್ನನ್ನು ಶಾಸಕ ಮಾಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿದ್ದೀರಿ.

ನಾನು ಪಾವಗಡಕ್ಕೆ ಬಂದು ನಿಮ್ಮ ಹತ್ತಿರಕೆ ಬಂದಿದ್ದೇನೆ ನಮ್ಮ ಅನುಬಂಧ ಈ ದಿನ ಅಲ್ಲ ಎಷ್ಟೋ ವರ್ಷಗಳಿಂದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಅನುಬಂಧವನ್ನು ಬೆಳೆಸಿಕೊಂಡು ಬಂದಿದ್ದೇವೆ. ಈ ಪಕ್ಕದಲ್ಲಿರುವ ತಾಲೂಕುಗಳು ರಾಪ್ತೋಡ್ ಮತ್ತು ಪಾವಗಡ ಪೆನುಗೊಂಡ ಮಡಕಶಿರ ಸೇರದಂತೆ ಈ ತಾಲೂಕುಗಳಲ್ಲಿ ಅನುಬಂಧವನ್ನು ಇಟ್ಟುಕೊಂಡಿದ್ದೇವೆ. ಅದಕ್ಕೆ ಪಾವಗಡ ತಾಲೂಕಿನಲ್ಲಿರುವ ನನ್ನ ಆತ್ಮೀಯ ಅಣ್ಣ ತಮ್ಮಂದಿರೇ ಹಾಗೂ ನನ್ನ ಬಂದು ಮಿತ್ರರೇ. ಹಾಗೂ ನನ್ನ ಅಭಿಮಾನಿಗಳೇ ಎಲ್ಲರೂ ಸೇರಿ ನಮ್ಮ ಮಗಳು ಮದುವೆಗೆ ಬಂದು ಆಶೀರ್ವಾದ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಈ ವೇಳೆಯಲ್ಲಿ ಭಾಗವಹಿಸಿದವರು, ಪಾವಗಡ ತಾಲೂಕಿನ ರೆಡ್ಡಿ ಜನಾಂಗದ ಚಂದ್ರಶೇಖರ್. ಬೋರ್ವೆಲ್ ಮಂಜುನಾಥ್ ರೆಡ್ಡಿ. ಬಿಕೆಹಳ್ಳಿ ಹನುಮಂತ್ ರೆಡ್ಡಿ. ರೈತ ಸಂಘದ ನರಸಿಂಹ ರೆಡ್ಡಿ ಬಿ ಕೆ ಹಳ್ಳಿ ಮಧು ಇನ್ನೂ ತಾಲೂಕಿನ ಪ್ರಕಾಶ್ ರೆಡ್ಡಿ ಅಭಿಮಾನಿಗಳು ಆಗಮಿಸಿದ್ದರು.

ವರದಿ: ಶಿವಾನಂದ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ