ಸಿರುಗುಪ್ಪ : ನಮ್ಮೂರ ನಮ್ಮ ಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಕನಸಿನ ಯೋಜನೆಯಾಗಿದ್ದು ಹತ್ತು ವರ್ಷದಿಂದ ರಾಜ್ಯಾದ್ಯಂತ ಬರಗಾಲದ ಸನ್ನಿವೇಶ, ನೀರಿನ ಮಹತ್ವಗಳನ್ನರಿತು ಈ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ .
ಈಗಾಗಲೇ 980ಕ್ಕೂ ಅಧಿಕ ಕೆರೆಗಳಿಗೆ ಜೀವ ತುಂಬಲಾಗಿದೆ. ಕೆರೆಗಳನ್ನು ಸಂರಕ್ಷಿಸುವಂತೆ ಕರೆ ನೀಡಿ ನೀಡಿದ್ದಾರೆ.
ಸಿರುಗುಪ್ಪ ತಾಲೂಕು ಕೊಂಚಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸಾಪುರ ಗ್ರಾಮದ ದಾಸಾಪುರ ಕೆರೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆಗೆ ಮರುಜೀವ ನೀಡಲಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನೇತೃತ್ವದಲ್ಲಿ ಕೊಂಚಗೇರಿ ಗ್ರಾಮ ಪಂಚಾಯತಿ, ದಾಸಾಪುರ ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ದಾಸಪುರ ಕೆರೆ ಅಭಿವೃದ್ಧಿಗಾಗಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಬುಧವಾರ ಭೂಮಿ ಪೂಜೆ ಮಾಡಿ ಕೆರೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಸಂಘಗಳ ರಚನೆ ಮಾಡಿ ಬ್ಯಾಂಕಿನ ಮುಖೇನ ಸಾಲ ಕೊಡಿಸುವುದಲ್ಲದಲ್ಲದೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪಡಿಸುತ್ತೇವೆ.
ಪೂರಕವಾದ ಕೆರೆ ಪುನಃಶ್ಚೇತನ, ದೇವಸ್ಥಾನಗಳ ಜೀರ್ಣೋದ್ಧಾರ, ಜ್ಞಾನದೀಪ ಕಾರ್ಯಕ್ರಮದಡಿ ಶಿಕ್ಷಕರ ವದಗಣೆ ಶುದ್ದಗಂಗಾ ಘಟಕ ರಚನೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ್ ಎಸ್, ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ದೊಡ್ಡ ಮುದುಕನ ಗೌಡ, ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬುಳ್ಳಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಕೆರೆ ಇಂಜಿನಿಯರ್ ಸತೀಶ್, ಹಿಟಾಚಿ ಮಾಲಕ ಮರಿ ತಿಮ್ಮಪ್ಪ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಟಿ ಚಂದ್ರಪ್ಪ, ಹಳ್ಳಿ ಬಸವರಾಜ್ ಊರಿನ ಮುಖಂಡರಾದ ರುದ್ರಪ್ಪ, ಪ್ರಭುಸ್ವಾಮಿ ಕೃಷಿ ಮೇಲ್ವಿಚಾರಕ ವೀರೇಶ್ ವಲಯದ ಮೇಲ್ವಿಚಾರಕ ಶಿವಪ್ಪ ಪೂಜಾರಿ ಸೇವಾ ಪ್ರತಿನಿಧಿ ಹೊನ್ನೂರ್ ಸ್ವಾಮಿ ರೈತ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ಶ್ರೀನಿವಾಸ ನಾಯ್ಕ


