Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ತುಂಗಭದ್ರಾ ಜಲಾಶಯದ ಸುಭದ್ರೆತೆಗಾಗಿ ಎರಡನೇ ಬೆಳೆಯನ್ನ ತ್ಯಾಗಮಾಡಿ'

Advertisement
ಸಿರುಗುಪ್ಪ: ಈ ಭಾಗದ ವರದಾನ ಹಾಗೂ ಜೀವನದಿಯಾಗಿರುವ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಗಾಭದ್ರ ಜಲಾಶಯವು ಈಗಾಗಲೇ ಅಭದ್ರತೆಯಲ್ಲಿರುವ ಕಾರಣ ಅನ್ನದಾತರು ಎರಡನೇ ಬೆಳೆಯನ್ನ ತ್ಯಾಗಮಾಡಬೇಕೆಂದು ಈ ಭಾಗದ ರೈತರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಶಾಸಕ ಬಿ.ಎಮ್.ನಾಗರಾಜ ಅವರು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಸಂತ, ದಾಸಶ್ರೇಷ್ಟ ಶ್ರಿ ಕನಕದಾಸರ 538ನೇ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಸುಧೀರ್ಘವಾಗಿ ಮಾತನಾಡಿದ ಅವರು ರೈತರನ್ನು ನಷ್ಟದಲ್ಲಿ ದೂಡುವ ಉದ್ದೇಶ ನಮಗಾಗಲೀ ನಮ್ಮ ಸರ್ಕಾರಕ್ಕೆ ಇಲ್ಲ.
ನಮ್ಮ ಭಾಗದ ರೈತರಿಗೆ ಅನ್ಯಾಯವಾಗದಂತೆ ನಮ್ಮ ಕೈಲಾದಷ್ಟು ಒತ್ತಡವನ್ನು ನಾವು ಹಾಕಿದ್ದೇವೆ. ಆದರೆ ನೀರಾವರಿ ತಜ್ಞರು ಗೇಟ್ ಅಳವಡಿಕೆ ಕಾರ್ಯ ವಿಳಂಬವಾದಷ್ಟು ಜಲಾಶಯಕ್ಕೆ ಧಕ್ಕೆಯಾಗುವುದಾಗಿ ತಿಳಿಸಿದ್ದಾರೆ. ಕಳೆದ ಸಲ ಒಂದು ಗೇಟ್ ಅಳವಡಿಕೆ ಸಾಕಷ್ಟು ಕಷ್ಟ ಪಡಬೇಕಾಯಿತು.
ತುಂಗಾಭದ್ರ ಜಲಾಶಯದ ಭದ್ರತೆಯ ನಿರ್ಧಾರ ಕೇವಲ ನಮ್ಮ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ. ನೆರೆಯ ಆಂದ್ರಪ್ರದೇಶ, ತೆಲಂಗಾಣದ ಸಹಮತ ಬೇಕಿದೆ. ಏಕೆಂದರೆ ಅವರು ಸಹ ನೀರಾವರಿ ಹಂಚಿಕೆ ಹಾಗೂ ಜಲಾಶಯದ ಭದ್ರೆಯಲ್ಲಿ ಪಾಲುದಾರರಾಗಿತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರ ನೀಡುವ ನಿರ್ದೇಶನದಂತೆಯೂ ನಾವು ನಡೆದುಕೊಳ್ಳಬೇಕಾಗುತ್ತದೆ.
ಗೇಟ್ ಅಳವಡಿಕೆಗೆ ಈಗಾಗಲೇ ಕಂಪನಿಯೊಂದಕ್ಕೆ 54 ಕೋಟಿ ರೂಪಾಯಿಗಳ ಟೆಂಡರ್ ಮಾಡಿ ಒಪ್ಪಂದವನ್ನು ಸರ್ಕಾರವು ಮಾಡಿಕೊಂಡಿರುತ್ತದೆ. ಅವರಿಗೆ ಅನುಕೂಲವಾಗುವ ರೀತಿಯಲ್ಲಿ ನೀರನ್ನು ಬಿಡುಗಡೆ ಮಾಡಿ ಅವರಿಗೆ ಅಣೆಕಟ್ಟು ಆ ಕಂಪನಿಯ ಸುಪರ್ದಿಗೆ ಕೊಡಬೇಕಾಗುತ್ತದೆ.
ಕಾರಣವಿಷ್ಟೇ ತಲಾತಲಾಂತರ ನಮ್ಮ ಅಣೆಕಟ್ಟಿನಲ್ಲಿ ನೀರು ಹರಿಯಬೇಕೆಂದರೆ ಅದು ಸುರಕ್ಷತೆಯಾಗಿರಬೇಕು. ಕಾರಣ ನಾವೆಲ್ಲರೂ ಒಂದು ಬೆಳೆಯನ್ನು ತ್ಯಾಗಮಾಡಬೇಕಿದೆಂದು ತಿಳಿಸಿದರು.

ವರದಿ : ಶ್ರೀನಿವಾಸ ನಾಯ್ಕ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ