Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸದಲಗಾ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಭೋಸಲೆಯವರ ಬೀಳ್ಕೊಡುಗೆ

Advertisement
--------------------------------ನೂತನ ಮುಖ್ಯಾಧಿಕಾರಿ ಸುಂದರ ರುಗ್ಗೆಯವರಿಗೆ ಸ್ವಾಗತ

------------------------------------ಅಧಿಕಾರದ ಚೌಕಟ್ಟಿನಲ್ಲಿ ಅಭಿವೃದ್ಧಿ ಸಾಧಿಸಿದ ಹೆಮ್ಮೆ

ಚಿಕ್ಕೋಡಿ: ತಾಲೂಕಿನ ಸದಲಗಾ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಭೋಸಲೆಯವರಿಗೆ ಬೀಳ್ಕೊಡುಗೆ ಹಾಗೂ ನೂತನ ಮುಖ್ಯಾಧಿಕಾರಿ ಸುಂದರ ರುಗ್ಗೆಯವರಿಗೆ ಸ್ವಾಗತ ಸಮಾರಂಭ ಪುರಸಭೆ ಸಿಬ್ಬಂದಿ ಪೌರ ಕಾರ್ಮಿಕರರಿಂದ ನಡೆಯಿತು.



ಪುರಸಭೆ ಕಾರ್ಯಾಲಯದಲ್ಲಿ ನಡೆದ ಸ್ವಾಗತ ಹಾಗು ಬಿಳ್ಕೊಡುವ ಸಮಾರಂಭದ ಪ್ರಾರಂಭದಲ್ಲಿ ಪುರಸಭೆಯ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಕಿರಿಯ ಅಭಿಯಂತರರಾದ ಜಿ. ಆರ್ ಪತ್ತಾರ ಅವರ ಹಸ್ತದಿಂದ ವರ್ಗಾವಣೆಗೊಂಡ ಶಿವಾನಂದ ಭೋಸಲೆ ಹಾಗೂ ಅಧಿಕಾರ ಸ್ವೀಕರಿಸಿದ ನೂತನ ಮುಖ್ಯಾಧಿಕಾರಿ ಸುಂದರ ರುಗ್ಗೆಯವರಿಗೆ ಶಾಲ, ಶ್ರೀಫಲ್ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಸ್ವಾಗತ ಸ್ವೀಕರಿಸಿ ಮಾತನಾಡಿದ ಶಿವಾನಂದ ಭೋಸಲೆ ಸಾರ್ವಜನಿಕರ ಕುಂದುಕೊರತೆ ಗಮನದಲ್ಲಿಟ್ಟುಕೊಂಡು, ಪುರಸಭೆಯ ಆಡಳಿತ ಮಂಡಳಿ ಯ ಸಹಕಾರ್ಯದೊಂದಿಗೆ ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ನಿರ್ವಹಿಸಿದ ನನಗೆ ಸಮಾಧಾನ ತಂದಿದೆ.

ವಿಶೇಷವೆಂದರೆ ಕೇಂದ್ರ ಬಸ್ ನಿಲ್ದಾಣದಲ್ಲಿಯ ಫೇವರ್ ಬ್ಲಾಕ್ ಹಾಕುವುದು.ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನದಿ ದಡದಲ್ಲಿಯ ಜಾಕ್ವೆಲ್ ನಲ್ಲಿ ಕೆಟ್ಟು ನಿಂತ ವಿದ್ಯುತ್ ಪಂಪಗಳ ರಿಪೇರಿ ಕಾರ್ಯ, ಪಟ್ಟಣ ಸ್ವಚ್ಛತೆಗೆ ಮಹತ್ವ ನೀಡಿ ಬೇಕಾಗುವ ವಾಹನ, ಜೆಸಿಬಿ ಯಂತ್ರ, ಟ್ರ್ಯಾಕ್ಟರ, ಫಾಂಗಿಂಗ ಮಷಿನ್ ಖರೀದಿ, ಏಕವೀರಿ ಕೆರೆ ಸ್ವಚ್ಛತೆಗೆ ಅನುದಾನ ಸೇರಿ, ಸಕಾಲಕ್ಕೆ ಸಿಬ್ಬಂದಿಯ ಸಂಬಳ ನೀಡುವ ವ್ಯವಸ್ಥೆ ಮಾಡಿದ್ದು ಎರಡು ವರ್ಷಗಳ ಅವಧಿಯಲ್ಲಿ ಸಮಾಧಾನ ತಂದಿದೆ ಎಂದರು.

ಇದೇ ವೇಳೆ ಸಿಬ್ಬಂದಿಗಳಾದ ಸಂಜು ಗುಡೆ , ಐ. ಬಿ. ಶೇಷಮ್ ಮಾತನಾಡಿದರು. ಸಮಾರಂಭ ದಲ್ಲಿ ವಿಜಯ ಕೊಕೆನೆ, ಕೃಷ್ಣಾ ಬಾಗಡಿ, ಎಂ.ಬಿ.ಗೌಂಡಿ, ಜಿ.ಎಸ್. ಕಾಂದೇಕರ್. ಪಿ.ಬಿ.ಗರದಾಳೆ, ನೀರು ಪೂರೈಕೆ, ಸ್ವಚ್ಛತೆಯ ವಿಭಾಗದ ಕಾರ್ಮಿಕರು, ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ