ಭಾಲ್ಕಿ: ದೇಶದ ಅಖಂಡತೆಗೆ ಸರ್ದಾರ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರವಾಗಿದೆ ಎಂದು ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೆರೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗವನ್ನು ಭಾರತದ ಒಕ್ಕೂಟದಲ್ಲಿ ಸೇರಿದ ದಿನವೇ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸುತ್ತೇವೆ. ೧೯೪೭ರಲ್ಲಿ ಅ.೧೫ ರಂದು ಭಾರತ ದೇಶ ಸ್ವತಂತ್ರವಾದರೂ, ಕಲ್ಯಾಣ ಕರ್ನಾಟಕದ ಭಾಗಗಳು ನಿಜಾಮನ ಆಡಳಿತದಲ್ಲಿದ್ದವು. ರಜಾಕರರ ದುರಾಡಳಿತಿಂದ ಬೇಸತ್ತ ಈ ಭಾಗದ ಜನರಿಗೆ ಮುಕ್ತಿ ನೀಡಿದ ದಿನವೇ ನಾವು ಉತ್ಸವವಾಗಿ ಆಚರಿಸುತ್ತಲಿದ್ದೇವೆ. ದೇಶದ ಅಖಂಡತೆಗೆ ಸರ್ದಾರ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರವಾಗಿದೆ. ಭಾರತಕ್ಕೆ ಸ್ವಾತಂತ್ರ ಸಿಕ್ಕ ದಿನಮಾನಗಳಲ್ಲಿ ಅನೇಕರ ರಾಜರು ಸ್ವಾತಂತ್ರ ಭಾರತದಲ್ಲಿ ಸೇರಲು ಇಚ್ಛಿಸಿರಲಿಲ್ಲ. ಅಂತಹ ಸಂದರ್ಭದಲ್ಲಿ ಉಕ್ಕಿನ ಮನುಷ್ಯ ಸರ್ದಾರ ಪಟೇಲರ ಚಾಕ ಚಕ್ಕತೆಯಿಂದ ಈ ಭಾಗ ಭಾರತದೇಶದಲ್ಲಿ ಒಗ್ಗೂಡಿತು ಎಂದು ಹೇಳಿದರು.
ಉಪನ್ಯಾಸಕ ದಯಾಸಾಗರ ಬಿಡವೆ ವಿಶೇಷ ಉಪನ್ಯಾಸ ಮಂಡಿಸಿದರು. ಡಿ.ವಾಯ್.ಎಸ್.ಪಿ ಬಲ್ಲಪ್ಪ ನಂದಗಾವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದರ ಸಿಂಗ್, ಸೂರ್ಯಕಾಂತ ಬಿರಾದಾರ, ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಇಸಿಓ ಮಲ್ಲಿಕಾರ್ಜುನ ಕನ್ನಾಳೆ, ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿದೇರ್ಶಕ ಮಲ್ಲಿನಾಥ ಸಜ್ಜನ, ತೋಟಗಾರಿಕೆ ಅಧಿಕಾರಿ ಮಾರುತಿ, ಕೃಷಿ ಅಧಿಕಾರಿ ಸತೀಶ ಮುದ್ದಾ, ಪ್ರಮುಖರಾದ ಸಂತೋಷ ಬಿಜಿಪಾಟಿಲ, ಸೋಮನಾಥಪ್ಪ ಅಸ್ಟೂರೆ, ಜಯರಾಜ ದಾಬಶೆಟ್ಟಿ, ಸಿಆರ್ಪಿ ಪ್ರಭು ಡಿಗ್ಗೆ, ಐಟಿಐ ಪ್ರಾಂಶುಪಾಲ ಲಕ್ಶ್ಮೀಕಾಂತ ಪವಾರೆ ಉಪಸ್ಥಿತರಿದ್ದರು. ದೀಪಕ ಥಮಕೆ ನಿರೂಪಿಸಿದರು.
ವರದಿ : ಸಂತೋಷ ಬಿಜಿ ಪಾಟೀಲ


