Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್.ಆರ್. ಮೆಲೋಡಿಯಿಂದ ಸವಿಗಾನ ಸಂಗೀತ ಕರೋಕೆ ಕಾರ್ಯಕ್ರಮ

Advertisement
ತುರುವೇಕೆರೆ: ಜಿಲ್ಲೆಯ ಪ್ರಸಿದ್ಧ ಆರ್.ಆರ್. ಮೆಲೋಡಿ ಸಂಸ್ಥೆಯು ತುರುವೇಕೆರೆಯ ಜೆ.ಕೆ.ಕಂಫರ್ಟ್ಸ್ ನಲ್ಲಿ ಸವಿಗಾನ ಸಂಗೀತ ಕರೋಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಹಾಗೂ ಜಾನಪದ ಕಲಾವಿದ ಈಶ್ವರದಲ, ಮನಸ್ಸನ್ನು ಶೀಘ್ರವಾಗಿ ಪ್ರಫುಲ್ಲಗೊಳಿಸುವಲ್ಲಿ ಸಂಗೀತ ಸಹಕಾರಿಯಾಗಿದೆ. ವ್ಯಕ್ತಿಯ ಏಕಾಗ್ರತೆ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಗೀತ ಪ್ರಮುಖ ಅಸ್ತ್ರವಾಗಿದೆ ಎಂದರು.



ಆರ್.ಆರ್. ಮೆಲೋಡಿ ಸಂಸ್ಥೆಯ ರಮ್ಯಾಈಶ್ವರ್ ಮಾತನಾಡಿ, ಸಂಗೀತಕ್ಕೆ ಪುಟಾಣಿ ಮಕ್ಕಳಿಂದ ಹಿರಿಯವರೆಗೆ ಎಲ್ಲರನ್ನೂ ಆಕರ್ಷಿಸುವ ಮಹಾನ್ ಶಕ್ತಿ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತ ಚಿಕಿತ್ಸೆ ಎಂಬ ವಿಧಾನವೂ ಸಹ ಇದೆ. ಅಂತಹ ಸಂಗೀತ ಎಲ್ಲರ ಮನಸ್ಸಿಗೆ ಮುದ ನೀಡುವುದಲ್ಲದೆ ನಾವೂ ಹಾಡುವುದನ್ನು ಕಲಿಯಬೇಕೆಂಬ ಆಸೆಯನ್ನು ಸಹ ಹುಟ್ಟುಹಾಕುತ್ತದೆ ಎಂದರು.

ಆರ್.ಆರ್. ಮೆಲೋಡಿ ಸಂಸ್ಥೆಯು ಯಾವುದೇ ಆರ್ಕೆಸ್ಟ್ರಾ ತಂಡವಲ್ಲ. ಸಂಗೀತದ ಆಸಕ್ತಿಯುಳ್ಳ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಸಂಗೀತ ಸವಿಯನ್ನು ಉಣಬಡಿಸಿ, ಕರೋಕೆ ಮೂಲಕ ಹಾಡುವ ಸಂಗೀತಾಸಕ್ತಿಯನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಸಹೋದರರಾದ ಸಂಸ್ಥೆಯ ಹೆಗ್ಗೆರೆ ರಾಮಚಂದ್ರ ಅವರ ಪರಿಶ್ರಮ, ಸಹಕಾರದಿಂದ ಜಿಲ್ಲೆಯಾದ್ಯಂತ ಸವಿಗಾನ ಸಂಗೀತ ಕರೋಕೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಪ್ರಿಯರು ಪಾಲ್ಗೊಂಡು ತಾವೂ ಸಹ ನಮ್ಮೊಂದಿಗೆ ಹಾಡುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದ್ದಾರೆಂದರು.

ಈ ಸಂದರ್ಭದಲ್ಲಿ ಚಿತ್ರನಟ ಕಿಶೋರ್ ದಲ, ಆರ್.ಆರ್.ಮೆಲೋಡಿಯ ಹಾಗೂ ಕಾರ್ಯಕ್ರಮ ಆಯೋಜಕ ಹೆಗ್ಗೆರೆ ರಾಮಚಂದ್ರ, ತುರುವೇಕೆರೆಯ ಶಶಿನಾಗರಾಜ್, ವಾಸವಿ ಸತೀಶ್, ತುಮಕೂರಿನ ಬಸವರಾಜ್, ಚಿಕ್ಕನಾಯಕನಹಳ್ಳಿಯ ಗಂಗಾಧರ್, ತಿಪಟೂರಿನ ರಾಜೇಶ್ವರಿ ಸೇರಿದಂತೆ ಸಂಗೀತಾಸಕ್ತರು ಪಾಲ್ಗೊಂಡಿದ್ದರು.

ವರದಿ: ಗಿರೀಶ್ ಕೆ ಭಟ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ