Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸೌರಭ ಕಾನ್ವೆಂಟ್ ಪುಟಾಣಿಗಳ ವಿಶೇಷ ಸಾಧನೆ

Advertisement
ತುರುವೇಕೆರೆ : ತಾಲೂಕಿನ ಮಾಯಸಂದ್ರದ ಸೌರಭ ಕಾನ್ವೆಂಟಿನ ಪುಟಾಣಿ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 22 ಬಹುಮಾನಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ.

ಮಾಯಸಂದ್ರ ಕ್ಲಸ್ಟರ್ ವ್ಯಾಪ್ತಿಯ ದೊಡ್ಡಬೀರನಕೆರೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಂಠಪಾಠ, ದೇಶಭಕ್ತಿ ಗೀತೆ, ಕಥೆ ಹೇಳುವುದು, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು 13 ಪ್ರಥಮ, 5 ದ್ವಿತೀಯ, 4 ತೃತೀಯ ಸ್ಥಾನಗಳನ್ನು ಪಡೆದು ಒಟ್ಟು 22 ಬಹುಮಾನಗಳನ್ನು ಪಡೆದುಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಎಲ್.ಪಿ.ಎಸ್. ವಿಭಾಗದಿಂದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಆರ್ಯ ಪ್ರಥಮ, ಅರೇಬಿಕ್ ಕಂಠಪಾಠದಲ್ಲಿ ಅಬ್ದುಲ್ ವಹಾಬ್ ಅರ್ಫಾನ್ ಪ್ರಥಮ, ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ಧನಲಕ್ಷ್ಮೀ ಪ್ರಥಮ, ದೇಶಭಕ್ತಿ ಗೀತೆಯಲ್ಲಿ ಪೂರ್ವಿಕ ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ವರ್ಷಿಣಿ ಪ್ರಥಮ, ಛದ್ಮವೇಷದಲ್ಲಿ ಧನಲಕ್ಷ್ಮೀ ದ್ವಿತೀಯ, ಭಕ್ತಿಗೀತೆಯಲ್ಲಿ ಪೂರ್ವಿಕ ತೃತೀಯ, ಕ್ಲೇಮಾಡಲಿಂಗ್ ನಲ್ಲಿ ಅಲ್ಫಿಯಾ ಬಾನು ತೃತೀಯ, ಚಿತ್ರಕಲೆಯಲ್ಲಿ ವರ್ಷಿತ ತೃತೀಯ ಸ್ಥಾನ ಪಡೆದರೆ, ಹೆಚ್.ಪಿ.ಎಸ್. ವಿಭಾಗದಲ್ಲಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಶ್ರೇಯ ಕೆ.ಸಿ. ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಆಲಿಯಾ ಫಿರ್ದೋಸ್ ಪ್ರಥಮ, ಹಿಂದಿ ಕಂಠಪಾಠದಲ್ಲಿ ನೂರ್ ಸಾದಿಯಾ ಪ್ರಥಮ, ಅರೇಬಿಕ್ ಕಂಠಪಾದಲ್ಲಿ ಆಲಿಯಾ ಫಿರ್ದೋಸ್ ಪ್ರಥಮ, ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ನೂತನ್ ಕೆ.ವೈ. ಪ್ರಥಮ, ಕವನ ವಾಚನದಲ್ಲಿ ಉಮ್ಮೆ ಕುಲ್ಸುಮ್ ಪ್ರಥಮ, ಪ್ರಬಂಧದಲ್ಲಿ ನೂರಾ ಸಾದಿಯಾ ದ್ವಿತೀಯ, ಭಕ್ತಿಗೀತೆಯಲ್ಲಿ ಜಸ್ಮಿತಾ ಲಕ್ಷ್ಮೀ ದ್ವಿತೀಯ, ಕ್ಲೇ ಮಾಡಲಿಂಗ್ ನಲ್ಲಿ ಕೆಂಪೇಗೌಡ ದ್ವಿತೀಯ, ಆಶುಭಾಷಣದಲ್ಲಿ ನೂತನ್ ಕೆ.ವೈ. ತೃತೀಯ, ಅಭಿನಯ ಗೀತೆಯಲ್ಲಿ ನಿಧಿಶ್ರೀ ಯು. ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು 22 ಬಹುಮಾನಗಳನ್ನು ತಂದು ಶಾಲೆಗೆ ಕೀರ್ತಿ ತಂದ ಪುಟಾಣಿಗಳನ್ನು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕಲ್ಪನಾ ಮುನಿರಾಜು, ಮುಖ್ಯ ಶಿಕ್ಷಕ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಶಿಕ್ಷಕರಾದ ನುಸರತ್ ಜಬಿನ್, ಲಲಿತಾ ಭಟ್, ಗೀತಾಮಣಿ, ಸೌಮ್ಯ, ನಮಿರಾ ಖಾನಂ, ಪ್ರಭಾ ಸೇರಿದಂತೆ ಬೋಧಕ, ಬೋಧಕೇತರ ವರ್ಗ ಅಭಿನಂದಿಸಿದರು.

ವರದಿ : ಗಿರೀಶ್ ಕೆ ಭಟ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ