
ಸಾನಿಧ್ಯ ಜಗದ್ಗುರು ಪಂಚಮ ಡಾ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀ ಜಗದ್ಗುರು ದುರದುಂಡಿಶ್ವರ ಸಿದ್ದ ಸಂಸ್ಥಾನ ಮಠ ನಿಡಸೋಸಿ ಮಹಾಸ್ವಾಮಿಗಳು ಶ್ರೀ ಮಹರ್ಷಿ ವಾಲ್ಮೀಕಿರವರ ಭಾವಚಿತ್ರ ಪುಷ್ಪ ಅರ್ಪಿಸಿ ದೀಪವನ್ನು ಬೆಳಗಿಸಿ ಪೂಜೆಯನ್ನು ಮಾಡಲಾಯಿತು.
ಅನೇಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶ್ರೀ ಗಳಿಂದ ಪ್ರವಚನ ಮಂತ್ರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಎಸ್. ಎಸ್. ಎಲ್. ಸಿ. ರಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಲರಾಮ ಕಟ್ಟಿಮನಿ ತಶೀಲ್ದಾರರು ಹಾಗೂ ಅಧ್ಯಕ್ಷರು ಉತ್ಸವ ಸಮಿತಿ ಹುಕ್ಕೇರಿ, ಪಿ. ಬಿ. ಮಠದ ಮುಖ್ಯಧಿಕಾರಿಗಳು ಪುರಸಭೆ ಸಂಕೇಶ್ವರ್, ಗುರುಶಾಂತ ಪಾವಟಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹುಕ್ಕೇರಿ, ಟಿ. ಆರ್. ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಹುಕ್ಕೇರಿ, ಬಿ. ಸಿ. ಸಿದ್ನಾಳ ಮುಖ್ಯಧಿಕಾರಿಗಳು ಪುರಸಭೆ ಹುಕ್ಕೇರಿ, ಮಹೇಶ್ ಬ. ಭಜಂತ್ರಿ, ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿಗಳು ಹುಕ್ಕೇರಿ, ಕರೆಪ್ಪಾ ಗುಡ್ಡೆನ್ನವರ,ರಮೇಶ್ ಹುಂಜಿ, ಆನಂದ ಸಿ. ಪಾಟೀಲ್, ಶ್ರೀ ಮಯೂರ್ ಘಸ್ತಿ, ಶಾನೂಲ ತಶೀಲ್ದಾರ್ ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೇಶಗೋಳ

