ಸಿಂಧನೂರು : ಸಾಲಿಡಾರಿಟಿ ಯೂತ್ ಮೂವ್ಮೆಂಟ್(SYM) ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (SIO),ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (JIO) ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ( JIH) ಅವರ ಸಂಯುಕ್ತ ಆಶ್ರಯದಲ್ಲಿ ಸಿಂಧನೂರು ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸನ್ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ತಾಸಿಲ್ದಾರರು ಸಿಂಧನೂರು ಅವರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡ ಕ್ರಮವನ್ನು ಖಂಡಿಸಿ,ಲಡಾಖ್ನ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ತೋರಿದ ನಿರ್ಲಕ್ಷ್ಯವನ್ನೂ ಟೀಕಿಸಿ
ನವದೆಹಲಿಯ ಜಂತರ್ ಮಂತರ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿಜೆಪಿ ಸರ್ಕಾರವು ನಡೆಸಿದ ಲಾಠಿ ಚಾರ್ಜ್ ಪೊಲೀಸರು ನಡೆಸಿರುವ ಅಮಾನವೀಯ ದೌರ್ಜನ್ಯ ಪೂರ್ಣವರ್ತನೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ಭಾರತ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ ಹಾಗೂ ಸಂಕಷ್ಟಕ್ಕೆ ಸಿಲುಕಿ ಜೀವ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಸರ್ಕಾರ ತಲಾ ರೂ.1 ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು
ಈ ವೇಳೆ :ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲ್ಲೂಕು ಅಧ್ಯಕ್ಷರಾದ ಅಬುಲೈಸ್ ನಾಯ್ಕ್, (CSI) ತಾಲ್ಲೂಕು ಅಧ್ಯಕ್ಷರಾದ ಅಫ್ಜಲ್ ಹುಸೈನ್ (JIO) ಘಟಕ ಅಧ್ಯಕ್ಷೆಯಾದ ನೇಹಾ ಸಮರೀನ್, ಜಿಹಾದಿ (JIH) ತಾಲ್ಲೂಕು ಅಧ್ಯಕ್ಷರಾದ ಹುಸೇನ್ ಸಾಬ್, ಜಿಹಾದಿ (JIO) ಮಹಿಳಾ ಘಟಕ ಅಧ್ಯಕ್ಷೆಯಾದ ಸುಮಯ್ಯಾ ಪರ್ವೀನ್, ಮುಖಂಡರಾದ: ಬಸವರಾಜ ಬಾದರ್ಲಿ,ಬಿ ಎನ್, ಯಾರದಿಹಾಳ, ಚಾಂದ್ ಜಾಗಿರ್ದಾರ್, (KVS) ನ ಚಾಂದ್ ಪಾಷಾ, ಶಫೀಲ್ಲಾ ಖಾನ್, ಸೊಹೈಲ್ ದೇಸಾಯಿ, ಖಾಜಿ ಜಾವೀದ್, ಇಸ್ಮಾಯಿಲ್, ನಯೀಮ್ ಇರ್ಫಾನ್, ಸೊಹೈಲ್, ಡಾ. ವಾಸಿಂ, ತನ್ವೀರ್, ಇಮ್ತಿಯಾಜ್, ಫಾರೂಕ್ ಅತ್ತಾರ್, ಅಜರ್, ಮನ್ಸೂರ್, ಯಹಿಯಾ ರಾಜ್ವಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು,ಅನ್ವಿತ ಕಾಲೇಜು, ಸನ್ ರೈಸ್ ಕಾಲೇಜು, ವಿಷನ್ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ,


