
ಕಂಬಳಿಹಾಳ -ನಂದವಾಡಗಿ ಪರಮ ಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು . ಬೆಳಗ್ಗೆ ಸುಕ್ಷೇತ್ರ ಅಂಕಲಿಮಠದಲ್ಲಿ ಸದ್ಗುರು ಶ್ರೀ ನಿರುಪಾಧೀಶ್ವರ ಹಾಗೂ ಮಾತೋಶ್ರೀ ಪಾರ್ವತಮ್ಮನವರ ಕರ್ತೃ ಗದ್ದುಗೆಗೆ ಮಹಾರುದ್ರಭಿಕ್ಷೇಕ ಹಾಗೂ ವಟುಗಳಿಗೆ ಅಯ್ಯಾಚಾರ ನಡೆಯಿತು.
ಈ ಸಂದರ್ಭದಲ್ಲಿ ಅಂಕಲಿಮಠದ ಪರಮ ಪೂಜ್ಯ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು. ತುರವಿಹಾಳ ಪರಮ ಪೂಜ್ಯ ಅಮರಗುಂಡ ದೇವರು. ಸಾಬಣ್ಣ ಅಂಕಲಿಮಠ. ಅಮರಯ್ಯ ಸ್ವಾಮಿ ಸೇರಿದಂತೆ ಮಹಿಳೆಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ

