Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ

Advertisement
ಸಿಂಧನೂರು : ನಗರದ ಟೌನ್ ಹಾಲ್ ನಲ್ಲಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಿಂಧನೂರು ವತಿಯಿಂದ ಭಾನುವಾರ ಮಾದಿಗ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು ಈ ಕಾರ್ಯಕ್ರಮದ ಉದ್ಘಾಟನೆ ಶಾಸಕ ಹಂಪನಗೌಡ ಬಾದರ್ಲಿ ಅವರು ವಹಿಸಿಕೊಂಡು ಮಾತನಾಡಿ,ಮಾದಿಗ ಸಮಾಜದ ಬಹುದಿನದ ಬೇಡಿಕೆ ಒಳ ಮೀಸಲಾತಿ ಸ್ವಲ್ಪ ತೊಡಕು ಇರುವ ಕಾರಣ ಅದನ್ನು ಪರಿಹರಿಸಿ ಆದಷ್ಟುಬೇಗ ಸನ್ಮಾನ್ಯ ಸಿದ್ದರಾಮಯ್ಯನವರು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆಂದು ನನ್ನ ಅಭಿಪ್ರಾಯ ಹಾಗೂ ಬಾಬಾ ಜಗಜೀವನ್ ರಾಮ್ ಅವರ ಭವನ ನಿರ್ಮಾಣಕ್ಕೆ ರೈಲ್ವೆ ಸ್ಟೇಷನ್ ಬಳಿರುವ 1 ಎಕರೆ ಜಮೀನಿನಲ್ಲಿ ಭವನ ನಿರ್ಮಾಣ ಮಾಡಬೇಕೆಂದು ಈಗಾಗಲೇ ರೂ 1 ಕೋಟಿ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿದ್ದು ಅನುಮತಿ ದೊರೆತ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.



ಇದೇ ಸಂದರ್ಭದಲ್ಲಿ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರು ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಇದು ಒಂದು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ
ಶಿಕ್ಷಣ ಇದ್ದರೆ ಬದುಕು ಆಸ್ತಿ ಇದ್ದರೆ ಬದುಕಲ್ಲಾ, ನಾವು ನೀವು ಎಲ್ಲರೂ ಇಲ್ಲಿ ನಿಂತು ಮಾತಾಡುತ್ತೇವೆಂದರೆ ಇದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ ಎಂದರು ಆದಷ್ಟು ಬೇಗ ನಿಮ್ಮ ಸಮಾಜಕ್ಕೆ ಒಳಮಿಸಲಾತಿ ಲಾಭ ದಕ್ಕಲಿ ಜಗಜೀವನ್ ರಾಮ್ ಭವನ ನಿರ್ಮಾಣವಾಗಲಿ ಭವನಕ್ಕೆ ನನ್ನ ಎಂಎಲ್ಸಿ ಅನುದಾನದಲ್ಲಿ 5 ಲಕ್ಷ ರೂ. ನೀಡುತ್ತೇನೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ, ಲಿಂಗಪ್ಪ ಪಿ ಡಿ ಓ, ಅಧ್ಯಕ್ಷರು ಮಾದಿಗ ಕ್ಷೇಮಾಭಿವೃದ್ಧಿ ಸಂಘ, ಕ. ರಾ. ಸ. ನೌ. ಸಂಘ ಸಿಂಧನೂರು ಅವರು ವಹಿಕೊಂಡಿದ್ದು ವಿಶೇಷ ಉಪನ್ಯಾಸ ಕೃಷ್ಣ ಶಾವಾಂತಗೇರ ನಿರ್ದೇಶಕರು ಆಹಾರ ಇಲಾಖೆ ಹಾಗೂ ಜಿಲ್ಲಾ ಅಧ್ಯಕ್ಷರು ಕ. ರಾ. ಸ. ನೌ. ಸಂಘ ರಾಯಚೂರು ಉಪಸ್ಥಿತಿಯಲ್ಲಿ
ಮುಖ್ಯ ಅತಿಥಿಗಳಾಗಿ, ಕೆ. ಕರಿಯಪ್ಪ ಬಿ ಜೆ ಪಿ ಮುಖಂಡರು, ಬಿ. ರೆಡ್ಡಿ ಜಿಲ್ಲಾ ಅಧ್ಯಕ್ಷರು ಮಾದಿಗ ಕ್ಷಮಾಭಿವೃದ್ಧಿ ಸಂಘ, ಮರಿಯಪ್ಪ ಜಾಲಿಹಾಳ ಅಧ್ಯಕ್ಷರು ಮಾದಿಗ ಸಮಾಜ, ಆರ್. ಅಂಬ್ರುಶ್ ಕಾರ್ಯದರ್ಶಿ ಮಾದಿಗ ಸಮಾಜ, ಧನರಾಜ್ ಪ್ರಭಾರಿ ಎ ಇ ಇ, ದುರ್ಗಪ್ಪ ಅಸಮಕಲ್, ಡಾ. ಹುಸೇನಪ್ಪ ಅಮರಾಪುರ, ಈಶ್ವರ್ ಹಲಗಿ, ದುರ್ಗಪ್ಪ ಗುಡದೂರು, ಲಕ್ಷ್ಮಣ ಮೂಡಲಗಿರಿ ಕ್ಯಾಂಪ್, ಶೇಖರಪ್ಪ ಗಿಣಿವರ, ಅಲ್ಲಮ ಪ್ರಭು ಪೂಜಾರಿ, ಹುಲುಗಪ್ಪ ಉಪ್ಪಲದೊಡ್ಡಿ, ನಿರುಪಾದಿ ನಾಗಲಾಪುರ, ಡಿ. ಎಚ್. ಪೂಜಾರ್, ನಾಗರಾಜ ಕವಿತಾಳ, ಇನ್ನು ಅನೇಕರಿದ್ದರು

ವರದಿ:ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ