ಮಾನ್ವಿ: ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು.ಪಟ್ಟಣದ ಈದ್ಗಾ ಫಂಕ್ಷನ್ ಹಾಲ್ನಲ್ಲಿ ತಾಲೂಕು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಮಾನ್ವಿ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿನ 164 ಖಾಸಗಿ ಶಾಲೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಕರು ಶಿಕ್ಷಣ ನೀಡುವ ಮೂಲಕ ಅವರ ಉತ್ತಮ ಭವಿಷ್ಯ ರೂಪಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಕೆ.ಕೆ.ಆರ್.ಡಿ.ಬಿ.ಗೆ ನೀಡಲಾಗುವ ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿಯೇ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಪಡೆಯಲು ಅಗತ್ಯ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ ಎಂದು ತಿಳಿಸಿದರು.ಶಾಸಕ ಹಂಪಯ್ಯನಾಯಕ ಮಾತನಾಡಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಕೇವಲ ಅಂಕಗಳನ್ನು ಗಳಿಸುವುದನ್ನು ಹೇಳಿಕೊಡದೆ ಶಿಕ್ಷಣದ ಜೋತೆಗೆ ಸಂಸ್ಕಾರ.ಸಂಸ್ಕೃತಿಯ ಬಗ್ಗೆ ತಿಳಿಸಿಕೊಡಬೇಕು ಖಾಸಗಿ ಶಾಲೆಯ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ತಾಲೂಕಿನ ನಾಲ್ಕು ಶಿಕ್ಷಕರಿಗೆ ತಲಾ 8 ಗ್ರಾಂ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮಾನ್ವಿಯ ಅಧ್ಯಕ್ಷರಾದ ರಾಜಾಸುಭಾಶ್ಚಂದ್ರನಾಯಕ ಮಾತನಾಡಿ ಪ್ರತಿ ಮಗುವಿಗೂ ಕೂಡ ಮಾಧ್ಯಮದ ಆಯ್ಕೆಗೆ ಅವಕಾಶ ನೀಡಬೇಕು, ಸರಕಾರಶಿಕ್ಷಣ ಇಲಾಖೆಯ ಮೂಲಕ ಆರ್.ಟಿ.ಐ, ನವೀಕರಣ,ಮಾಧ್ಯಮ ಬದಲಾವಣೆ,ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು.ರಾಜ್ಯದಲ್ಲಿ ಖಾಸಗಿ ಶಾಲೆ ರಕ್ಷಣೆಕಾಯ್ದೆಯನ್ನು ಜಾರಿಗೆ ತರುವ ಮೂಲಕ ಶಿಕ್ಷಣಸಂಸ್ಥೆಗಳಿಗೆ ರಕ್ಷಣೆ ನೀಡಬೇಕು,ಶಿಕ್ಷಕರಿಗೆ ಜೀವವಿಮೆ,ಆರೋಗ್ಯ ವಿಮೆ,ಹಾಗೂ 1995 ರ ನಂತರದ ಖಾಸಗಿ ಕನ್ನಡ ಶಾಲೆಗಳಿಗೆ ಅನುದಾನ ನೀಡಬೇಕು.ಕೆ.ಕೆ.ಆರ್.ಡಿ.ಬಿ.ಅನುದಾನದಲ್ಲಿ ಖಾಸಗಿ ಶಾಲೆಗಳಲ್ಲಿ ಮೂಲಸೌಕರ್ಯಕ್ಕಾಗಿ ಅಗತ್ಯ ಅನುದಾನವನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.
ತಾಲೂಕಿನ ವಿವಿಧ ಖಾಸಗಿ ಶಾಲೆಗಳ 50 ಉತ್ತಮ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಶಾಸಕರ ಬಂಗಾರದ ಪದಕಕ್ಕೆ ಅಯ್ಕೆಯಾದ 4 ಶಿಕ್ಷಕರಾದ ಜೋಸೆಫ್ ಎಸ್.ಬೈಲಾ,ಕಡುಲಾಂಗ್ ಗಂಗಮೀ,ಸುಮಯ್ಯ ಖಾನಮ್,ತಹೂರಾರಾನಾ ರವರಿಗೆ ತಲಾ 8ಗ್ರಾಂ.ಬಂಗಾರಾದ ಪದಕವನ್ನು ವಿತರಿಸಿ ಶಾಸಕ ಹಂಪಯ್ಯನಾಯಕ ಸನ್ಮಾನಿಸಿದರು.
ಕಲ್ಮಠ ಶ್ರೀ ವಿರೂಪಾಕ್ಷಪಂಡಿತಾರಾಧ್ಯಶಿವಾಚಾರ್ಯ ಮಹಾಸ್ವಾಮಿಗಳು. ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ,ಬಸವನಗೌಡ ಬ್ಯಾಗವಾಟ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ.ಡಿ. ಬಿ.ಕೆ.ಆಮರೇಶಪ್ಪ .ಲಕ್ಷ್ಮೀದೇವಿ ನಾಯಕ, ನಯೋಪ್ರ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಜಿ.ನಾಗರಾಜ,ಸೈಯಾದ್ ಅಕ್ವರ್ ಪಾಷಾ, ರಾಜಾ ರಾಮಚಂದ್ರನಾಯಕ, ಶೇಖಫರೀದ್ ಉಮ್ರಿ. ಮಹಾಂತೇಶ್ ಸ್ವಾಮಿ ,ಖಾಲೀದ್ ಖಾದ್ರಿ ಗುರು, ಹೆಚ್.ಮೌನೇಶಗೌಡ, ಶರ್ಫುದ್ದಿನ್ ಪೋತ್ನಾಳ್,ಸಣ್ಣ ಬಸವನಗೌಡ, ಜಯಣ್ಣ, ಬಿ.ವಿ.ರೆಡ್ಡಿ, ನಾಗೇಶ, ಪ್ರಕಾಶ, ಬಲರಾಮರೆಡ್ಡಿ, ಮನೋಜಕುಮಾರ ಮಿಶ್ರ, ರವಿಭೂಷಣ, ಪ್ರಕಾಶಪಾಟೀಲ್, ರಾಜಶೇಖರ ಪಾಟೀಲ್,ಕೆ.ಇ.ನರಸಿಂಹಲು, ರಾಜು ತಾಳಿಕೋಟೆ ಸೇರಿದಂತೆ ತಾಲೂಕಿನ ವಿವಿಧ ಖಾಸಗಿ ಶಾಲೆಗಳ ಶಿಕ್ಷಕರು ಆಡಳಿತ ಮಂಡಳಿಯವರು ಭಾಗವಹಿಸಿದರು.
ವರದಿ :ಆಂಜನೇಯ ನಸಲಾಪುರ


