ನವದೆಹಲಿ: ನಗರದ ಶಾಹದ್ರಾ ಪ್ರದೇಶದ ಜನವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ ೯ ಮಂದಿ ಅಸುನೀಗಿರುವ ಘಟನೆ ರವಿವಾರ ಬೆಳಿಗ್ಗೆ ಸಂಭವಿಸಿದೆ.
ಶಾರ್ಟ್ ಸರ್ಕ್ಯೂಟ್ನಿಂದ ದುರಂತ ಸಂಭವಿಸಿರಬಹುದೆAದು ಹೇಳಲಾಗುತ್ತಿದೆ. ದೆಹಲಿ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳ ಪ್ರಕಾರ ಘಟನೆ ನಡೆದ ಸ್ಥಳದಿಂದ ಬೆಳಿಗ್ಗೆ ೩:೨೭ ನಿಮಿಷಕ್ಕೆ ಕರೆ ಬಂದಿತ್ತು.
ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಘಟನೆ ಸ್ಥಳಕ್ಕೆ ದಾವಿಸಿತ್ತು. ಬೆಂಕಿ ನಂದಿಸುವ ೧೪ ವಾಹನಗಳು ಹಾಗೂ ೮೦ ಮಂದಿ ಅಗ್ನಿ ಶಾಮಕ ಸಿಬ್ಬಂದಿ ಘಟನೆ ಸ್ಥಳಕ್ಕೆ ತಲುಪಿ ನಿರಂತರ ಯತ್ನದಿಂದ ಬೆಳಿಗ್ಗೆ ೮ ಘಂಟೆ ಸುಮಾರಿಗೆ ಪರಿಸ್ಥಿತಿ ಹತೋಟಿಗೆ ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

