Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಂಗ ಕಲಾವಿದ ರಾಘವೇಂದ್ರಗೆ ತಾಲ್ಲೂಕು ಆಡಳಿತದಿಂದ ಸನ್ಮಾನ

Advertisement
ತುರುವೇಕೆರೆ : ಪಟ್ಟಣದ ರಂಗಭೂಮಿ ಕಲಾವಿದ ಟಿ.ಎಸ್. ರಾಘವೇಂದ್ರ ಅವರ ರಂಗಭೂಮಿಯ ಸೇವೆಯನ್ನು ಗುರುತಿಸಿ ತಾಲ್ಲೂಕು ಆಡಳಿತ ಸ್ವಾತಂತ್ರ್ಯ ದಿನಾಚರಣೆಯಂದು ಸನ್ಮಾನಿಸಿತು.

ಶಾಸಕ ಎಂ.ಟಿ.ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ರಂಗಭೂಮಿಯ ಹಿರಿಯ ದಿಗ್ಗಜ ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ರಂಗಮಂದಿರ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಂಗಭೂಮಿ ಕಲಾವಿದ ಟಿ.ಎಸ್.ರಾಘವೇಂದ್ರ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿಸಲಾಯಿತು. ರಂಗಭೂಮಿ, ಕಲೆ, ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿರುವ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ರಾಘವೇಂದ್ರ ಅವರಿಗೆ ಸ್ಥಳದಲ್ಲೇ ಪೌರಾಣಿಕ ನಾಟಕದಲ್ಲಿನ ಶ್ರೀಕೃಷ್ಣನ ಗೀತೆಯೊಂದನ್ನು ಹಾಡುವಂತೆ ಸೂಚಿಸಿದರು. ಶಾಸಕರ ಆಶಯದಂತೆ ರಾಘವೇಂದ್ರ ಶ್ರೀಕೃಷ್ಣನ ಗೀತೆಯನ್ನು ಹಾಡಿ ಗಣ್ಯರು, ನಾಗರೀಕರನ್ನು ರಂಜಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ರಂಗಭೂಮಿ ಕಲಾವಿದ ಟಿ.ಎಸ್.ರಾಘವೇಂದ್ರ, ತಾಲ್ಲೂಕು ಆಡಳಿತ ಹಾಗೂ ಗಣ್ಯರು ನನ್ನ ರಂಗಭೂಮಿ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಬಹಳ ಸಂತೋಷ ತಂದಿದೆ. ತಾಲ್ಲೂಕು ಆಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ರಂಗಭೂಮಿಯ ಬಗ್ಗೆ ಆಸಕ್ತಿ ಮತ್ತು ಅರಿವಿಲ್ಲದ ನನ್ನನ್ನು ರಂಗಭೂಮಿಗೆ ಕರೆತಂದು ಬಣ್ಣ ಹಚ್ಚಿ ಅಭಿಮನ್ಯುವಿನ ಪಾತ್ರ ನೀಡಿ ರಂಗಭೂಮಿಯ ವೇದಿಕೆಗೆ ಕರೆತಂದು ಆಸಕ್ತಿ ಬರುವಂತೆ ಮಾಡಿದ್ದು ಜೋಗಿಪಾಳ್ಯದ ಗೋವಿಂದಪ್ಪನವರು, ಆ ನಂತರದಲ್ಲಿ ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷರಾದ ಅಮಾನಿಕೆರೆ ಮಂಜುನಾಥ್, ರಂಗಕಲಾವಿದ ದೇವೀಹಳ್ಳೀ ಮಂಜಣ್ಣ, ಚಂದ್ರಮೂರ್ತಿ ಅವರುಗಳು ನನ್ನಲ್ಲಿರುವ ರಂಗಕಲೆಯನ್ನು ಗುರುತಿಸಿ ನಾಟಕದಲ್ಲಿ ವಿಭಿನ್ನ ಪಾತ್ರದಲ್ಲಿ ಅವಕಾಶಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇವರುಗಳಿಲ್ಲದಿದ್ದರೆ ನಾನೊಬ್ಬ ಕಲಾವಿದ ಎಂದು ಅನಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇಂದು ನನಗೆ ತಾಲ್ಲೂಕು ಆಡಳಿತ ನೀಡಿರುವ ಗೌರವ ಸನ್ಮಾನವನ್ನು ರಂಗಭೂಮಿಯ ಈ ನಾಲ್ವರು ಹಿರಿಯರಿಗೆ ಸಮರ್ಪಣೆ ಮಾಡುತ್ತೇನೆ ಎಂದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ