ಕೊಲ್ಲಾಪುರ: ಮಹಾರಾಷ್ಟ್ರದ ಕೊಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಮಧ್ಯವಸತಿಯಲ್ಲಿರುವ ವಿವೇಕಾನಂದ ಕಾಲೇಜ್, ಹೋಟೆಲ್. ಉಡಲ್ಯಾಂಡ ಪರಿಸರದಲ್ಲಿ ಹುಲಿ ಕಾಣಿಸಿಕೊಂಡಿದ್ದರಿಂದ ಜನರು ಭಯಭೀತರಾದರು.

ರಾತ್ರಿ ಮೇರಿ ವೆದರ್ ಗ್ರೌಂಡ್ ಪರಿಸರದಲ್ಲಿ ಕೆಲವು ವಾಹನ ಚಾಲಕರಿಗೂ ಕಾಣಿಸಿಕೊಂಡ ಹುಲಿ ನೇರ ಪಟ್ಟಣದ ಮಧ್ಯ ಭಾಗದಲ್ಲಿ ಪ್ರವೇಶಿಸಿತು. ಸುಮಾರು ಒಂದುವರೆ ಗಂಟೆಗಳ ಪ್ರಯತ್ನದ ನಂತರ ಅರಣ್ಯ ಇಲಾಖೆಗೆ ಸಿಬ್ಬಂದಿಯ ಚಾಣಾಕ್ಷತೆಯಿಂದ ಹುಲಿ ಬಲೆಗೆ ಬಿದ್ದಿತು. ತದನಂತರ ಹುಲಿಗೆ ಮತ್ತೇರುವ ಇಂಜೆಕ್ಷನ್ ಮಾಡಿ ಸೆರೆಹಿಡಿದರು.
[video width="848" height="480" mp4="http://bharathvaibhav.com/wp-content/uploads/2025/11/WhatsApp-Video-2025-11-12-at-7.16.09-PM.mp4"][/video]
ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಓಂಕಾರ ಕಾಟಕರ ಮೇಲೆ ದಾಳಿ ಮಾಡಿ ದ್ದು ಬಚಾವಾಗಿದ್ದಾರೆ ಇದರಿಂದಾಗಿ ಕೆಲ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸುಮಾರು ಒಂದೂವರೆ ಗಂಟೆ ವರೆಗೆ ಅವಿರತ ಪರಿಶ್ರಮದಿಂದ ಹುಲಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ಮಹಾವೀರ ಚಿಂಚಣೆ

