Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವಜ್ಞರ ವಚನಗಳಲ್ಲಿ ಆರೋಗ್ಯ ಮತ್ತು ಸಂಯಮ

Advertisement
ರ್ವೆಸಾಮಾನ್ಯವಾಗಿ ಎಲ್ಲರೂ ಬಯಸುವುದು ಸುಖಮಯವಾದ ಜೀವನವನ್ನು ಆದರೆ ಇದು ಬಯಕೆಯಷ್ಟೇ ಆಗಿದೆ.ಈ ಬಯಕೆಯನ್ನು ಈಡೇರಿಸಿಕೊಳ್ಳಲು ಜೀನದ ಶೈಲಿ ಮತ್ತು ವರ್ತನೆಗಳು ಕೂಡ ಬದಲಾಗಬೇಕು. ನಮ್ಮ ಪೂರ್ವಜನರು ಉತ್ತಮ ಜೀವನದ ಆದರ್ಶಗಳನ್ನು ಪಾಲಿಸಿಕೊಂಡು ನೂರಾರು ವರ್ಷಗಳ ಕಾಲ ಬದುಕಿದ್ದರು ಹಾಗೆ ಬದುಕಿದವರು ಈಗ ಅಲಲ್ಲಿ ಕೆಲವರು ಕಾಣ ಸಿಗುತ್ತಾರೆ. ಆದರೆ ನಮ್ಮ ಇಂದಿನ ಪೀಳಿಗೆ ಅವರ ಆದರ್ಶಗಳನ್ನು, ಜೀವನ ಪದ್ದತಿಗಳನ್ನು ಗಾಳಿಗೆ ತೂರಿ ಪಾಶ್ಚಾತ್ಯ ಐಶಾರಾಮಿ ಜೀವನಕ್ಕೆ ಮರುಳಾಗಿ ಅನೇಕ ತರಹದ ಸೇವಿಸಬಾರದಂತಹ ಆಹಾರ ಸೇವಿಸಿ ಅನೇಕ ರೋಗ-ರುಜಿನಗಳಿಗೆ ಆಹ್ವಾನ ನೀಡಿ ಅವುಗಳಿಂದ ಆಗುವ ತೊಂದರೆಗಳಿಂದ ಆರ್ತಧ್ಯಾನದಲ್ಲಿ ತೊಡಗಿ ನರಳಾಡುತ್ತಾ ಮಾನಸಿಕ ವೇದನೆಯನ್ನು ಅನುಭವಿಸುತ್ತಾ ಕೊನೆಗೆ ಕುಟುಂಬದವರಿಗೂ ಕೂಡ ಜಿಗುಪ್ಪೆ ಬರುವಂತಾಗಿ ನರಳಾಡುತ್ತಾ ಅಸು ನೀಗುತ್ತಿದ್ದಾರೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದಾಗ ನನಗನಿಸಿದ್ದು ಪಾಶ್ಚಾತ್ಯರ ಊಟದ ಪದ್ಧತಿ, ಲಗುಬಗೆಯ ಜೀವನ ಶೈಲಿ ಮುಂತಾದವುಗಳು ಸ್ಪಷ್ಟವಾದವು.

ಹೀಗೆ ಒಂದು ದಿನ ಯೋಚಿಸುತ್ತಿರುವಾಗ ಸರ್ವಜ್ಞರ ವಚನಗಳು ಎಂಬ ಪುಸ್ತಕ ದೊರೆಯಿತು. ಆಗ 800 ವರ್ಷಗಳ ಹಿಂದೆಯೇ ಸರ್ವಜ್ಞ ಕವಿ ಆರೋಗ್ಯದ ಬಗ್ಗೆ ಸರಳ ರೀತಿಯಲ್ಲಿ ತ್ರಿಪದಿಗಳಲ್ಲಿ ಹೇಳಿದ ವಚನಗಳು ನನಗೆ ದೊರೆತವು. ಅವನ್ನು ಓದಿದಾಗ ನನಗನಿಸಿದ್ದು ಈ ತರಹದ ಕಷ್ಟ-ಕಾರ್ಪಣ್ಯಗಳ ಜೀವನದ ಪರಿಣಾಮಕ್ಕೆ ನಮ್ಮ ಸಂಯಮರಹಿತ ಜೀವನ ಪದ್ದತಿಯೇ ಕಾರಣವಿದೆ ಎಂದೆನಿಸಿತು.

ಹಾಗಾದರೆ ಸಂಯಮ ಎಂದರೇನು ?

ಪರಪದಾರ್ಥಗಳಲ್ಲಿ ಲೀನವಾಗಿರುವ ಉಪಯೋಗವನ್ನು ಕ್ರೂಢೀಕರಿಸಿ ನಿಜ ಆತ್ಮನೆಡೆಗೆ - ಶಿವನೆಡೆಗೆ-ಜ್ಞಾನದೊಳಗೆ ಲೀನಗೊಳಿಸುವುದು ಎಂದಾಗುತ್ತದೆ. ಈ ಸಂಯಮವನ್ನು ಪ್ರಾಣಿ ಸಂಯಮ, ಇಂದ್ರಿಯ ಸಂಯಮ ಎಂಬುದಾಗಿ ವಿಂಗಡಿಸಲಾಗುತ್ತದೆ.

ಇಲ್ಲಿ ಪ್ರಾಣಿ ಸಂಯಮದ ಬಗ್ಗೆ ಹೇಳುವುದಾದರೆ ನಾವು ಅನೇಕ ಸ್ಥಾವರ ಜೀವಗಳ ಬಗ್ಗೆ ಇಟ್ಟಿರುವ ಅಗೌರವವೆಂದೇ ಹೇಳಬಹುದಾಗಿದೆ. ಮಣ್ಣು, ಬೆಂಕಿ, ಜಲ, ವಾಯು, ವನಸ್ಪತಿಗಳನ್ನು ಯಾವ ರೀತಿಯಾಗಿ ಹಿಂಸಿಸುತ್ತಿದ್ದೇವೆಂಬುದು ನಮಗರಿಯದಂತಾಗಿದೆ. ರಾಸಾಯನಿಕ ಬಳಕೆಯಿಂದ ಮಣ್ಣಿನಲ್ಲಿರುವ ಅನೇಕ ಜೀವಗಳ ನಾಶದಿಂದಾಗಿ ಮಣ್ಣು ಈಗ ನಿಶ್ಯಕ್ತ ಮಣ್ಣಾಗಿ ಪರಿವರ್ತನೆಗೊಂಡಿದೆ. ಇದನ್ನು ಕೃಷಿ ವಿಜ್ಞಾನಿಗಳೂ ಕೂಡ ಹೇಳಿದ್ದಾರೆ. ಅಷ್ಟೇ ಏಕೆ ಶ್ರೀ ಹೇಮಂತ ರಾಮಡಗಿಯವರು ತಮ್ಮ ಕೃಷಿ ಮಾಹಿತಿ ಪ್ರಸಾರ ಕಾರ್ಯಕ್ರಮದಲ್ಲಿ ಸೂಜಿಯ ತುದಿಯ ಮೇಲೆ ಅನಂತ ಜೀವಿಗಳು ಇರುತ್ತವೆ ಎಂಬುದಾಗಿ ಹೇಳಿದುದು ನೆನಪಿಗೆ ಬರುತ್ತದೆ. ಜಲವನ್ನಂತೂ ಅನೇಕ ರೀತಿಯಲ್ಲಿ ಮಾಲಿನ್ಯ ಮಾಡುತ್ತಿದ್ದಾರೆ. ಮನೆಯಲ್ಲಿ ಕಾರ್ಖಾನೆಗಳಲ್ಲಿ ಬರುವಂತಹ ತ್ಯಾಜ್ಯಗಳನ್ನೆಲ್ಲ ಹಾಕಿ ಜಲವೂ ಕೂಡ ರೋಗಮಯವಾಗಿಬಿಟ್ಟಿದೆ. ರೆಫ್ರಿಜರೇಟರ, ಏರಕಂಡಿಷನ್‌ಗಳಂತಹವುಗಳ ಬಳಕೆಯಿಂದ ಕಾರ್ಬನ್ ಮೋನಾಕ್ಸೆಡ್ ಉತ್ಪತ್ತಿಯಾಗಿ ವಾಯು ಕೂಡಮಲಿನವಾಗಿಬಿಟ್ಟಿದೆ. ಅಷ್ಟೇ ಅಲ್ಲ ವನಸ್ಪತಿಗಳ ನಾಶದಿಂದ ಅನಿರೀಕ್ಷಿತ ಮಳೆ, ಕ್ಷಾಮ, ಉಷ್ಣತೆಯ ತೀವ್ರತೆ ಎದುರಿಸುತ್ತಿದ್ದೇವೆ. ಹೀಗೆ ಇನ್ನೂ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ. ಇದೆಲ್ಲ ಪ್ರಾಣಿಸಂಯಮದ ಬಗೆಯಾದರೆ

ಇಂದ್ರಿಯ ಸಂಯಮದ ಬಗ್ಗೆ ಸರ್ವಜ್ಞರು ಪ್ರಾಮುಖ್ಯವಾಗಿ ತನ್ನ ತ್ರಿಪದಿಗಳಲ್ಲಿ ವರ್ಣಿಸಿದ್ದಾರೆ. ಇಂದ್ರಿಯಗಳಂತೂ ದಾಹದ ದುಃಖ ಉತ್ಪನ್ನ ಮಾಡುವಂಥ ಮಹಾವ್ಯಾದಿಗಳಿವೆ. ಇಂದ್ರಿಯ ವಿಷಯಗಳು ಸ್ವಲ್ಪ ಕಾಲದ ಸಲುವಾಗಿ ದಾಹದ ದುಃಖವನ್ನು ಉಪಶಮನ ಕಾರಣವಾಗಿ ವಿಪರೀತ ಅಪಥ್ಯ ಔಷಧಿಯಂತಿವೆ. ಇವುಗಳಿಂದ ಇಚ್ಛಾರೂಪದ ದಾಹ ವೃದ್ಧಿಸುತ್ತ ಹೋಗುತ್ತದೆ. ಯಾರು ಇಂದ್ರಿಯಗಳ ದಾಸರಾಗಿಬಿಟ್ಟಿದ್ದಾರೆ ಅವರು ಸ್ವಾಭಾವಿಕವಾಗಿ ದುಃಖಗಳೇ ಇದ್ದಾರೆ. ಮೀನು ತನ್ನ ರಸನೇಂದ್ರಿಯದ ವಿಷಯ ಆಧೀನವಾಗಿ ಗಾಳಕ್ಕೆ ಅಂಟಿಸಿದ ಮಾಂಸದ ತುಂಡಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತದೆ. ದುಂಬಿ ಕಮಲದ ಮಕರಂದ ಹೀರಲು ಹೋಗಿ ಘಾಣೇಂದ್ರಿಯದ ವಶವಾಗಿ ಸೂರ್ಯಾಸ್ತದಲ್ಲಿ ಕಮಲ ಮುದುಡುವನ್ನು ಲಕ್ಷಿಸದೇ ಪ್ರಾಣ ಕಳೆದುಕೊಳ್ಳುತ್ತದೆ. ಪತಂಗ ನೇತ್ರದ ವಿಷಯಾಧೀನವಾಗಿ ಬೆಂಕಿಗೆ ಬಿದ್ದು ಸಾವನ್ನಪ್ಪುತ್ತದೆ. ಜಿಂಕೆ ಕರ್ಣೇಂದ್ರಿಯದ ವಶವಾಗಿ ಬೇಟೆಗಾರನ ಕೊಳಲಿನ ಶಬ್ದಕ್ಕೆ ವಶವಾಗಿ ಪ್ರಾಣಹಾನಿ ಮಾಡಿಕೊಳ್ಳುತ್ತದೆ. ಸ್ಪರ್ಶನೇಂದ್ರಿಯದ ಆಧೀನವಾಗಿ ಹೆಣ್ಣಾನೆ ಅನೇಕ ತರಹದ ಕಷ್ಟ ಅನುಭವಿಸಬೇಕಾಗುತ್ತದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ