Ad imageAd image

ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಲ್ಲಪ್ಪ ಚೌಗಲೆ ಪಾರದರ್ಶಕವಾಗಿರುವುದಾಗಿ ಪ್ರಮಾಣ.

Bharath Vaibhav
ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಲ್ಲಪ್ಪ ಚೌಗಲೆ ಪಾರದರ್ಶಕವಾಗಿರುವುದಾಗಿ ಪ್ರಮಾಣ.
WhatsApp Group Join Now
Telegram Group Join Now

ಬೆಳಗಾವಿ:- ನಾವು ಪಾರದರ್ಶಕತೆಯಿಂದ, ಪ್ರಾಮಾಣಿಕವಾಗಿ ಜನರ ಏಳಿಗೆಗೆ ಶ್ರಮಿಸುತ್ತೆನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪ್ರೇಮ್ ಮಲ್ಲಪ್ಪ ಚೌಗಲೆ ಪ್ರಮಾಣ ಮಾಡಿದ್ದಾರೆ.

ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಎಲ್ಲಾ ಬೇಡಿಕೆಗಳನ್ನು ಕಾಲ ಕಾಲಕ್ಕೆ ಈಡೇರಿಸುತ್ತೆನೆ. ನಿಮ್ಮ ಬೇಡಿಕೆಗಳ ಕುರಿತು ಸಂಪೂರ್ಣ ಯೋಜನೆಯನ್ನು ತಯಾರಿಸಿ ಅದರ ವಿವರವನ್ನು ನಿಮ್ಮ ಮುಂದೆ ಇಡುತ್ತೆನೆ. ನೀವು ಒಪ್ಪಿದ ಯೋಜನೆಯನ್ನು ಪಾರದರ್ಶಕತೆಯಿಂದ ಕಾರ್ಯರೂಪಕ್ಕೆ ತರುತ್ತೆನೆ.

ಯೋಜನೆಗಳ ಅಧಿಕೃತ ವರದಿಯನ್ನು ನಿಮ್ಮ ಮುಂದೆ ಇಡುತ್ತೆನೆ. ನನ್ನ ಅವಧಿಯಲ್ಲಿ ಪ್ರತಿವಿಷಯಗಳಿಗು ನಿಮ್ಮದೆ ತೀರ್ಮಾಣ. ನಾನು ಬೇರೆ ಪಕ್ಷಗಳಿಗೆ ಸೇರುವುದಿಲ್ಲ. ಯಾವುದೇ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಈ ಎಲ್ಲ ವಿಷಯಗಳಿಗೆ ನಾನು ಭದ್ದನಾಗಿದ್ದೇನೆ. ಎಂದು ತಿಳಿಸಿದರು.

ವರದಿ: ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!