Ad imageAd image

ಐಗಳಿ ಡಿಸಿಸಿ ಬ್ಯಾಂಕ ಶಾಖೆಗೆ ಸುನೀತಾ ಐಹೊಳೆ ಭೇಟಿ

Bharath Vaibhav
ಐಗಳಿ ಡಿಸಿಸಿ ಬ್ಯಾಂಕ ಶಾಖೆಗೆ ಸುನೀತಾ ಐಹೊಳೆ ಭೇಟಿ
WhatsApp Group Join Now
Telegram Group Join Now

ಅಥಣಿ: ಬೆಳಗಾವಿಯ ಡಿಸಿಸಿ ಬ್ಯಾಂಕಿಗೆ ಸರಕಾರದಿಂದ ನಾಮ ನಿರ್ದೇಶಿತ ಸದಸ್ಯರಾದ ಸುನೀತಾ ಐಹೊಳೆ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಹಲವಾರು ಯೋಜನೆಗಳು ಇದ್ದು ಅವುಗಳನ್ನು ಸಮರ್ಪವಾಗಿ ಸಹಕಾರ ಸಂಘದೊಂದಿಗೆ ರೈತರಿಗೆ ನೀಡಲು ತಿಳಿಸಿದರು.

ಹೊಸದಾಗಿ ಸದಸ್ಯರನ್ನು ಮಾಡಿಕೊಳ್ಳಬೇಕು ಕೊಟ್ಟ ಸಾಲವನ್ನು ರಿನ್ವಲ್ ಮಾಡದ ರೈತರ ಹಣವನ್ನು ನಾವೇ ತುಂಬಿ ರಿನಿವಲ್ ಮಾಡಿಕೊಡುತ್ತೇವೆ ಇದಕ್ಕೆ ಲೋಕಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸಹಕಾರ ನೀಡುತ್ತಿದ್ದು ಎಷ್ಟೇ ಕೋಟಿ ಹಣ ಇದ್ದರೂ ಅದನ್ನು ತುಂಬಿ ರೈತರಿಗೆ ರಿನಿವಲ್ ಮಾಡಿಕೂಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರುಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯನ್ನು ನಿಭಾಯಿಸಲು ಮುಂದಿನ ಸಭೆಯಲ್ಲಿ ಚರ್ಚೆ ಮಾಡಲಾಗುವುದು.

೧೦೪ ವರ್ಷ ಇತಿಹಾಸ ಇರುವ ಈ ಬ್ಯಾಂಕಿಗೆ ಒಬ್ಬ ಬಡ ದಲಿತ ಮಹಿಳೆಗೆಯನ್ನು ನಿರ್ದೇಶಕರನ್ನಾಗಿ ನೇಮಕಮಾಡಿ ಕಾಂಗ್ರೆಸ್ ಪಕ್ಷ ನನಗೆ ಅತಿ ದೊಡ್ಡ ಜವಾಬ್ದಾರಿ ನೀಡಿದೆ ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಸಾಲ ನೀಡಿ ಮಹಿಳೆಯರಿಗೆ ಅನೂಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಹಕಾರ ಸಂಘದಗಳ ಕಾರ್ಯದರ್ಶಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು ನಂತರ ಐಗಳಿ ಗ್ರಾಮದ ಮಾದಿಗ ಸಮುದಾಯದ ವತಿಯಿಂದ ಹಮ್ಮಿಕೊಂಡ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!