ರಾಯಚೂರು :ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ, ಪೋಷಕರ-ಶಿಕ್ಷಕರ ಸಭೆಯನ್ನು ಸರ್ಕಾರದ ಸುತ್ತೋಲೆಯಂತೆ 07/03/2026 ರಂದು ಪೋಷಕರ-ಶಿಕ್ಷಕರ ಮಹಾಸಭೆ ನಡೆಸಬೇಕಾಗಿತ್ತು.

ಆದರೆ ಆಯುಕ್ತರ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಿ ಪೋಷಕರ ಶಿಕ್ಷಕರ ಸಭೆಯನ್ನು ಮಾಡದ ಪ್ರಭಾರಿ ಮುಖ್ಯ ಗುರುಗಳ ನಡೆಯನ್ನು ಸ್ವಾಮಿ ವಿವೇಕಾನಂದ ಯುವಶಕ್ತಿ ಯುವಕ ಸಂಘ(ರಿ) ಅರೋಲಿ ತೀವ್ರವಾಗಿ ಖಂಡಿಸುತ್ತೇವೆ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಈ ಮೂಲಕ BEO ಮತ್ತು DDPI ಅವರಿಗೆ ಆಗ್ರಹಿಸುತ್ತೇವೆ.ಎಂದು ಗ್ರಾಮಸ್ಥರು ಮಾದ್ಯಮಕ್ಕೆ
ಪ್ರತಿಕ್ರಿಯಿಸಿದರು. ವರದಿಗಾರರು ಗಾರಲದಿನ್ನಿ ವೀರನಗೌಡ




