ಧಾರವಾಡ:ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿ ಆವರಣದ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿದ ಯುವಕರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ 135ನೇ ಜಯಂತಿಯ ಅಂಗವಾಗಿ ಪರಮೇಶ್ವರ ಕಾಳೆ ಅವರ ಗೆಳೆಯರ ಬಳಗದ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿಯನ್ನು ತೊಳೆದು, ಗಾರ್ಡನ್ ಸ್ವಚ್ಛತೆ, ಲೈಟಿಂಗ್ ಡೆಕೋರೇಷನ್, ಪೇಂಟಿಂಗ್, ನೀಲಿ ಧ್ವಜ ಕಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನಿಂದ ಸ್ವಚ್ಛಗೊಳಿಸಿ ನಂತರ ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ಅಲ್ಲಿಯೇ ನಿಂತು ಇದ್ದ ಲೋಪದೋಷಗಳನ್ನು ಸ್ಥಳದಲ್ಲಿಯೇ ಸರಿಪಡಿಸಿದ್ದಲ್ಲದೆ ಜಯಂತಿಗೆ ಬರುವ ಸಾವಿರಾರು ಬಾಬಾಸಾಹೇಬರ ಅನುಯಾಯಿಗಳಿಗೆ, ಅಭಿಮಾನಿಗಳಿಗೆ ಏನು ತೊಂದರೆ ಆಗದಂತೆ ಸರಿಪಡಿಸಲಾಯಿತು.

ವರದಿ: ವಿನಾಯಕ ಗುಡ್ಡದಕೇರಿ




