Ad imageAd image

ಮುದಗಲ್ಲ ಪಟ್ಟಣದಲ್ಲಿ ಭೀಕರ ಅಪಘಾತ : ಇಬ್ಬರ ಸಾವು..!

Bharath Vaibhav
WhatsApp Group Join Now
Telegram Group Join Now

ಮುದುಗಲ್: ಬುಲೆರೋ ವಾಹನದ ಮುಂದಿನ ಟೈರ್ ಬ್ಲಾಸ್ಟ್ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೆ ಮೃತಪಟ್ಟಿರೋ ದಾರುಣ ಘಟನೆ ಮದುಗಲ್ ಪಟ್ಟಣದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಹಾಲಬಾವಿ ವೀರಭದ್ರೇಶ್ವರ ದೇವಸ್ಥಾನದ ಸಮೀಪ ಅಪಘಾತ ಜರುಗಿದೆ.

ಮೃತರು ಮಲ್ಲಾಪುರ ಗ್ರಾಮದಿಂದ ತಾವರಗೇರಕ್ಕೆ ಮದುವೆಗೆ ತೆರಳಿದ್ದರು. ಮದುವೆಗೆ ಹೋಗ ಬೇಕಾದವರು ಮಸಣ ಸೇರಿದಂತಾಗಿದೆ.

ಮೃತರು ಲಿಂಗಸೂಗೂರ ತಾಲ್ಲೂಕಿನ ಮಲ್ಲಾಪೂರು ಗ್ರಾಮದವರು ಎಂಬ ಮಾಹಿತಿ ದೊರೆತಿದ್ದು, ಬೈಕ್ ಸವಾರ ಶಿವಬಸವ 37 ವಷ೯ ಹೊನ್ನಮ್ಮ 33 ವಷ೯ ಮೃತ ದುರ್ದೈವಿಗಳು.

ಸ್ಥಳಕ್ಕೆ ರಾಯಚೂರು ಜಿಲ್ಲಾ ಹೆಚ್ಚವರಿ ಪೋಲಿಸ್ ಅಧಿಕಾರಿ ಶಿವಕುಮಾರ ಮುದಗಲ್ಲ ಪೋಲಿಸ್ ಠಾಣೆಯ ಪಿಎಸ್ಐ ಸದ್ದಾಂ ಹುಸೇನ್ , ಕ್ರೈಂ ಪಿಎಸ್ಐ ಮಲ್ಲಪ್ಪ ,ಹಾಗೂ
ಸಿಬ್ಬಂದಿ ಅಮರೇಶ ,ಹನುಮಂತ ಬಲೋರ ಗಾಡಿ ವಶಕ್ಕೆ ಪಡೆದಿದ್ದು ಚಾಲಕ ಪರಾರಿಯಾಗಿದ್ದಾನೆ ಮುದುಗಲ್ ಪೊಲೀಸ್ ಠಾಣೆಯಲ್ಲಿಪ್ರಕರಣ (FIR) ದಾಖಲಿಸಿಕೊಂಡಿದ್ದಾರೆ..

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!