ಸಿರುಗುಪ್ಪ : ನಗರದ ರೇಣುಕಾಶ್ರಮದ ಹತ್ತಿರದಲ್ಲಿ ನೂತನವಾಗಿ ಸಾಧನಾ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾರಂಭದ ಕಾರ್ಯಕ್ರಮವನ್ನು ರವಿವಾರದಂದು ಗುರು ಬಸವ ಮಠದ ಶ್ರೀ ಬಸವಭೂಷಣ ಸ್ವಾಮೀಜಿ ಅವರು ಉದ್ಘಾಟಿಸಿದರು.
ಹಳೇಕೋಟೆ ಶ್ರೀ ಮರಿತಾತ ಮಠದ ಶ್ರೀ ಸಿದ್ದಬಸವ ಶ್ರೀ ಅವರು ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಉತ್ತಮ ಶಿಕ್ಷಣ ಅತ್ಯಗತ್ಯವಾಗಿದ್ದು, ಅಂತಹ ಶಿಕ್ಷಣವನ್ನು ನೀಡಲು ಮುಂದಾಗಿರುವ ಶಾಲಾ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ. ಹಾಗೂ ಮುಂದಿನ ದಿನಗಳಲ್ಲಿ ಶಾಲೆಯ ಕೀರ್ತಿ ಉತ್ತುಂಗಕ್ಕೇರಲಿ ಎಂದು ಆಶೀರ್ವದಿಸಿದರು.
ವ್ಯವಸ್ಥಾಪಕ ನಿರ್ದೇಶಕ ಎನ್.ಲಿಂಗನಗೌಡ ಅವರು ಮಾತನಾಡಿ ಕಳೆದ ವರ್ಷ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ತರಬೇತಿ ನೀಡಲಾಗಿದ್ದು, ನವೋದಯ, ಸೈನಿಕ, ಕಿತ್ತೂರು ಸೈನಿಕ, ಮೊರಾರ್ಜಿ ದೇಸಾಯಿ, ಆದರ್ಶ ವಿದ್ಯಾಲಯ, ಅಲ್ಪ ಸಂಖ್ಯಾತರ ಮೊರಾರ್ಜಿ ಶಾಲೆಗಳಿಗೆ ನಮ್ಮ ಸಾಧನಾ ಕೋಚಿಂಗ್ ಸೆಂಟರ್ನಿಂದ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಈ ಸಲವು ನಮ್ಮ ಸೆಂಟರ್ನಲ್ಲಿ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಅಬ್ಯಾಕಸ್, ಯೋಗ, ನೃತ್ಯ ತರಬೇತಿಗಳ ಜೊತೆಗೆ, ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ.
ಶಾಲೆ ಮತ್ತು ವಸತಿ ಸಹಿತ ಕೋಚಿಂಗ್ ಸೆಂಟರ್ನ ತರಗತಿಗಳು ಆರಂಭವಾಗಿದ್ದು ಪಾಲಕರು ತಮ್ಮ ಮಕ್ಕಳ ದಾಖಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಮುಖಂಡರಾದ ಆರ್.ಸಿ.ಪಂಪನಗೌಡ, ಗೋನಾಳ್ ರಾಜಶೇಖರ ಗೌಡ, ಶಾಲಾ ಶಾಂತಿನಿಕೇತನ ಮುಖ್ಯಗುರು ಧರ್ಮಣ್ಣ, ಕೋಚಿಂಗ್ ಸೆಂಟರ್ ಮುಖ್ಯೋಪಾದ್ಯಾಯಿನಿ ಶಿಲ್ಪಾ ಹಾಗೂ ಶಾಲೆಯ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ