Ad imageAd image

ತನಿಖೆ ಮಾಡದೆ ನಿರ್ಲಕ್ಷ ಮಾಡಿದರೆ ಉಗ್ರ ಹೋರಾಟವನ್ನು ಮಾಡಲಾಗುತ್ತದೆ MRPS ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರ ಅಗ್ರಹ

Bharath Vaibhav
ತನಿಖೆ ಮಾಡದೆ ನಿರ್ಲಕ್ಷ ಮಾಡಿದರೆ ಉಗ್ರ ಹೋರಾಟವನ್ನು ಮಾಡಲಾಗುತ್ತದೆ MRPS ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರ ಅಗ್ರಹ
WhatsApp Group Join Now
Telegram Group Join Now

ಗುರುಮಠಕಲ್‌: ಗುರುಮಠಕಲ್ ಮತಕ್ಷೇತ್ರದ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಇತ್ತಿಚೆಗೆ ಸಿಕ್ಕಂತಹ ಇಂದಿರಾ ನಗರ ಬಡಾವಣೆಯ ಅಲೆಮಾರಿ ಬುಡಕಟ್ಟು ಸಮಾಜದ. ಇಬ್ಬರ ಹೆಣ್ಣು ಮಕ್ಕಳ. ಸಾಹು ಹನುಮಾನಸ್ಪದನವಾಗಿದೆ ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯ ಬಯಲಿಗೆ ತರಬೇಕೇಂದು ಯಾದಗಿರಿ ಜಿಲ್ಲೆಯ MRPS ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ

ಪಟ್ಟಣದ ಇಂದಿರಾನಗರದ ಅಲೆಮಾರಿ ಬುಡಗ ಜಂಗಮ ಜಾತಿಯ ಶ್ಯಾಮಮ್ಮ ಗಂ. ಹುಸೇನಪ್ಪ ಸಿರಿಗಿರಿ, ವಯಸ್ಸು: 20 ವರ್ಷ, ಸಾಯಮ್ಮ ತಂ. ಭೀಮಪ್ಪ ಸಿರಿಗಿರಿ, ವಯಸ್ಸು: 15 ವರ್ಷ ಇವರೀರ್ವರ
ಶವವು ಕಳೆದ ಬುಧವಾರ ಫೇ.12ರಂದು ಕಾಣಿಸಿಕೊಂಡಿದ್ದು ಸಾವನಂತೆ ಕಾಣುತ್ತಿಲ್ಲ, ಇದು ಆಕಸ್ಮಿಕ ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಈಗಾಗಲೇ ಸೈದಾಪೂರ ಠಾಣೆಯಲ್ಲಿ” ಎಫ್.ಐ.ಆರ್.

ದಾಖಲಾಗಿದ್ದು, ಇಬ್ಬರು ದಲಿತ ಸಮಾಜದ ಬಾಲಕಿಯರ ಸಾವಿನ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ಇವರ ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ, ಇವರ ಸಾವಿಗೆ ಕಾರಣರಾದವರ ಮೇಲೆ
ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ

ಘಟನೆ ಹಿನ್ನೆಲೆ: ಎಂದಿನಂತೆ ಶ್ಯಾಮಮ್ಮ
ಹಾಗೂ ಸಾಯಮ್ಮ ಯುವತಿಯರನ್ನು ಚಿಂದಿ ಆಯುಲು ನೀಲಹಳ್ಳಿ ಗ್ರಾಮದಲ್ಲಿ ಆಟೋದಲ್ಲಿ ಮಂಗಳವಾರ ಅಂದರೆ ಫೆ.11 ರಂದು ಬಿಟ್ಟಿರುತ್ತಾರೆ, ಅಂದು ಸಂಜೆ ಅವರು ಮರಳಿ ಬಾರದ ಸಂಧರ್ಭದಲ್ಲಿ ಪಾಲಕರು ಹುಡುಕಾಡಿದ್ದು ಮರುದಿನ ಫೇ.12ರಂದು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಇಬ್ಬರ ಶವವು ಸಿಕ್ಕಿರುತ್ತದೆ ಈ ಘಟನೆ ಬಗ್ಗೆ ಆದಷ್ಟು ಬೇಗ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು MRPS ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು

ವರದಿ : ರವಿ ಬುರನೋಳ

WhatsApp Group Join Now
Telegram Group Join Now
Share This Article
error: Content is protected !!