ವಿಜಯಪುರ : ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು 2025ನೇ ಸಾಲಿನ ‘ಪುಸ್ತಕ ಸೊಗಸು’ ಹಾಗೂ ‘ಮುದ್ರಣ ಸೊಗಸು’ ಬಹುಮಾನಗಳನ್ನು ಪ್ರಕಟಿಸಿದೆ. ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದ ಕೃತಿಗಳು ಹಾಗೂ ಪ್ರಕಾಶಕರ ಹೆಸರುಗಳನ್ನು ಪ್ರಕಟಿಸಲಾಯಿತು. ವಿಜಯಪುರದ ಕವಿ, ಲೇಖಕ, ಅನುವಾದಕರಾದ ಉಪನ್ಯಾಸಕ ದೇವೂ ಮಾಕೊಂಡ ಅವರು ಅನುವಾದಿಸಿದ ಪ್ರೊ. ಎಚ್ ಟಿ ಪೋತೆ ಹಸ್ತ ಪ್ರತಿ ಬಹುಮಾನ ಪಡೆದಿದ್ದ 'ಯುದ್ಧ ಮೃದಂಗ' ಅನುವಾದ ಕೃತಿಗೆ ೨೦೨೫ ನೆಯ ಸಾಲಿನ
‘ಪುಸ್ತಕ ಸೊಗಸು’ ವಿಭಾಗದ ಮೊದಲ ಬಹುಮಾನ ಲಭಿಸಿದೆ. ಪ್ರಶಸ್ತಿಯ ಮೊತ್ತ ೨೫೦೦೦ ರೂ ಒಳಗೊಂಡಿದೆ.ಈ ಕೃತಿಯು ಆಲಮೇಲದ ಬೆರಗು ಪ್ರಕಾಶನ ಪ್ರಕಟಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ವರದಿ: ಸಾಯಬಣ್ಣ ಮಾದರ


