ಹುಕ್ಕೇರಿ :ಗಣೇಶ ಚತುರ್ಥಿಗೆ ರಜೆ ಮೇಲೆ ಬಂದಿದ್ದ ಯೋಧ ಹುಕ್ಕೇರಿ ತಾಲ್ಲೂಕಿನ ಸೊಲ್ಲಾಪುರ ಗ್ರಾಮದ ನಿವಾಸಿ ಅಣ್ಣಾಸಾಹೇಬ ಮೋಹಿತೆ(೩೩) ಹೊಟ್ಟೆನೋವು ತಾಳಲಾರದೆ ಹರಗಾಪುರ ಗ್ರಾಮದ ಗುಡ್ಡದಲ್ಲಿ ಚತುರ್ಥಿಯದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಾಸಾಹೇಬ ರಜೆ ಮೇಲೆ ಕಳೆದ ಮೂರು ದಿನದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ.ನಿರಂತರ ಹೊಟ್ಟೆ ನೋವು ಕಾಣಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ ಎಂಸು ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.


