Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾದಕ ವಸ್ತುಗಳ ವಿರುದ್ಧ ಪಾವಗಡದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

ಯುವಕರೇ ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಂದ ದೂರವಿರಿ:ವೃತ್ತ ನಿರೀಕ್ಷಕರಾದ ಸುರೇಶ್

Advertisement

ಪಾವಗಡ : ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್, ತುಮಕೂರು ಜಿಲ್ಲಾ ಪೊಲೀಸ್, ಪಾವಗಡ ಪೋಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಬೃಹತ್ ಅರಿವು ಕಾರ್ಯಕ್ರಮವನ್ನು ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ  ವೃತ್ತ ನಿರೀಕ್ಷಕರಾದ ಸುರೇಶ್ ರವರು ಮಾತನಾಡಿ ಮಾದಕ ವಸ್ತುಗಳು ಔಷಧಿ ರೂಪ ಮತ್ತು ಮತ್ತೇರಿಸುವ ದುಶ್ಚಟ ಎಂಬ ಎರಡು ರೂಪಗಳಲ್ಲಿ ಲಭ್ಯವಿವೆ.

ಒಂದು ಬಾರಿ ಚಟಕ್ಕೆ ಒಳಗಾದರೆ ಹೊರಬರುವುದು ಕಷ್ಟ. ನಿಮ್ಮ ಜೀವನ ಕುಟುಂಬ ಹಾಗೂ ದೇಶದ ಭವಿಷ್ಯ ಹಾಳಾಗುತ್ತದೆ,ಆಂಧ್ರ, ಒರಿಸ್ಸಾ ದಿಂದ ಗಾಂಜಾ ಕಳ್ಳಸಾಗಣೆ ಮತ್ತು ಸ್ಥಳೀಯವಾಗಿ ಬೆಳೆಯುವ ಪ್ರಯತ್ನಗಳು ನಡೆಯುತ್ತಿವೆ.

 ಇಂತಹ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. 

ಜೊತೆಗೆ 18 ವರ್ಷದೊಳಗಿನವರು ವಾಹನ ಚಲಾಯಿಸಿದರೆ ಪೋಷಕರಿಗೆ ₹25,000 ದಂಡ ವಿಧಿಸಲಾಗುತ್ತದೆ ಎಂಬ ಕಾನೂನಿನ ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ವೃತ್ತ ನಿರೀಕ್ಷಕರಾದ ಕೊಟ್ರೇಶ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವಸ್ತು ಬಳಸಿದರೆ ಕನಿಷ್ಠ 1 ವರ್ಷದಿಂದ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಹಾಗೂ ₹1 ಲಕ್ಷದಿಂದ ₹40 ಲಕ್ಷದವರೆಗೆ ದಂಡ ವಿಧಿಸಬಹುದು,112 ಮತ್ತು ಮಾನಸ ಸಹಾಯವಾಣಿ 1933 ಗೆ ಧೈರ್ಯವಾಗಿ ಮಾಹಿತಿ ನೀಡಬಹುದು.
news_1782451051_0_737.webp

 

 ಮಾಹಿತಿದಾರರ ಗುರುತು ಸಂಪೂರ್ಣ ಗೌಪ್ಯವಾಗಿರುತ್ತದೆ ಎಂದು ಭರವಸೆ ನೀಡಿದರು.ಎಸ್.ಎಸ್.ಕೆ ಕಾಲೇಜಿನ ಪ್ರಾಂಶುಪಾಲ ಮನೋಜ್ ಕುಮಾರ್ ಮಾತನಾಡಿ ಕೂಡ ವಿದ್ಯಾರ್ಥಿಗಳಿಗೆ ದುಶ್ಚಟದಿಂದ ದೂರವಿರಲು ಕರೆ ನೀಡಿದರು.ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಬೋಧಿಸಲಾಯಿತು.

 ನಂತರ ಎಸ್.ಎಸ್.ಕೆ ಬಯಲು ರಂಗಮಂದಿರದಿಂದ ಶ್ರೀ ಶನಿಮಾತ್ಮ ದೇವಸ್ಥಾನದ ಮುಂಭಾಗವಾಗಿ ಅಂಬೇಡ್ಕರ್ ವೃತ್ತದವರೆಗೆ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
news_1782451092_0_465.webp

 

ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಂಬಾಬುಪಿ.ಎಸ್.ಐ ಗಳಾದ ಮುತ್ತುರಾಜು, ಮಹಮದ್, ಶಿವಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿಗಳಾದ ದೀಪಕ್,ಗೋಪಿ, ಶ್ರೀನಿವಾಸ್, ವೆಂಕಟೇಶ್ ನಾಯ್ಕ, ಸಂಜೀವ್ ಕುಮಾರ್, ನಟೇಶ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಶಿವಾನಂದ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿಗೂ ಸಮಾನ ಪರಿಹಾರ : ಹೈಕೋರ್ಟ್ ಆದೇಶರಾಜ್ಯದಲ್ಲಿ 91,152 ಅನರ್ಹರ ಪಿಂಚಣಿ ತಕ್ಷಣದಿಂದಲೇ ರದ್ದು : ರಾಜ್ಯ ಸರ್ಕಾರ ಆದೇಶ ಮಾದಕ ವಸ್ತುಗಳ ವಿರುದ್ಧ ಪಾವಗಡದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಇಂದು ನೂತನ ದಾಖಲೆ ಬರೆಯುವರೇ ವೈಭವ್ ಸೂರ್ಯವಂಶಿ?ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ದುರುಪಯೋಗ : ಟ್ರಸ್ಟಿ ಸೇರಿ 8 ಜನ ಅರೆಸ್ಟ್ಪಾಸ್‌ಪೋರ್ಟ್ ಶುಲ್ಕ ಭಾರಿ ಹೆಚ್ಚಳ : ಜುಲೈ 1 ರಿಂದಲೇ ನೂತನ ದರ ಜಾರಿಗೆವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಎಲ್ಲಾ ನಿರ್ಭಂಧ ತಕ್ಷಣದಿಂದಲೇ ತೆರವು ವಿಶ್ವಕಪ್ ಪುಟ್‌ಬಾಲ್: ೪ ಬಾರಿಯ ಚಾಂಪಿಯನ್ ಜರ್ಮನಿಗೆ ಆಘಾತಅಪಾಯಕಾರಿ ಆಟ: ಖಟಾರ್‌ನ ಮಡಿಬೋಗೆ ೫ ವರ್ಷ ನಿಷೇಧಲ್ಯಾಥಮ್, ಕಾನ್ವೆ ಶತಕ: ಬೃಹತ್ ಮೊತ್ತದತ್ತ ಕಿವೀಸ್